ಕರ್ನಾಟಕ

karnataka

ETV Bharat / state

ರೈಸ್​ ಮಿಲ್​ನಲ್ಲಿ ಅಕ್ಕಿ ಮೂಟೆ ಬಿದ್ದು ಇಬ್ಬರು ಕಾರ್ಮಿಕರು ಸಾವು

ರೈಸ್ ಮಿಲ್​ನಲ್ಲಿ ಅಕ್ಕಿ ಮೂಟೆಗಳು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.

By

Published : Jun 27, 2022, 11:10 AM IST

ರೈಸ್​ ಮಿಲ್​ನಲ್ಲಿ ಅಕ್ಕಿ ಮೂಟೆ ಬಿದ್ದು ಇಬ್ಬರು ಕಾರ್ಮಿಕರು ಸಾವು
ರೈಸ್​ ಮಿಲ್​ನಲ್ಲಿ ಅಕ್ಕಿ ಮೂಟೆ ಬಿದ್ದು ಇಬ್ಬರು ಕಾರ್ಮಿಕರು ಸಾವು

ರಾಯಚೂರು: ಅಕ್ಕಿ ಮೂಟೆಗಳು ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಸ್ವಾನ್ನಪ್ಪಿರುವ ದುರ್ಘಟನೆ ನಗರದ ಹೊರವಲಯದ ಮನ್ಸಲಾಪುರ ರಸ್ತೆಯಲ್ಲಿರುವ ರೈಸ್ ಮಿಲ್​​ನಲ್ಲಿ ನಡೆದಿದೆ.

ಬಿಹಾರ ಮೂಲದ ಉಪೇಂದ್ರ(40), ನಿತೀಶ್(25) ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮದರ್ ಇಂಡಿಯಾ ರೈಸ್ ಮಿಲ್​​ನಲ್ಲಿ ಅಕ್ಕಿ ಚೀಲಗಳನ್ನು ತೆಗೆಯಲು ಹೋದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಕಾರ್ಮಿಕರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

(ಇದನ್ನೂ ಓದಿ: ಪ್ರವಾಸಕ್ಕೆ ಬಂದಾಗ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಇಬ್ಬರು ಶವವಾಗಿ ಪತ್ತೆ)

ABOUT THE AUTHOR

...view details