ಕರ್ನಾಟಕ

karnataka

ಲಿಂಗಸುಗೂರಿನಲ್ಲಿ ಸಿಡಿಲು ಬಡಿದು 2 ಎತ್ತುಗಳು ಸಾವು

ರಾಯಚೂರಿನ ಲಿಂಗಸುಗೂರು ಬಳಿಯ ಗುರುಗುಂಟಾ ಹೋಬಳಿ ತೊಗರೇರದೊಡ್ಡಿಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ.

By

Published : May 17, 2020, 12:51 PM IST

Published : May 17, 2020, 12:51 PM IST

raichur
ಲಿಂಗಸುಗೂರಿನಲ್ಲಿ ಸಿಡಿಲು ಬಡಿದು 2 ಎತ್ತುಗಳು ಸಾವು

ರಾಯಚೂರು:ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಹೋಬಳಿ ತೊಗರೇರದೊಡ್ಡಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಘಟನೆ ಸಂಭವಿಸಿದ್ದು, ಮೊಹಿನುದ್ದೀನ್​ ಎಂಬವರಿಗೆ ಸೇರಿದ 2 ಎತ್ತುಗಳು ಸಾವನ್ನಪ್ಪಿವೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಬೆಲೆ ಬಾಳುವ ಎತ್ತುಗಳ ಸಾವಿನಿಂದ ಅಪಾರ ನಷ್ಟವಾಗಿದ್ದು, ಮಾಲೀಕರು ಕಂಗಾಲಾಗಿದ್ದಾರೆ.

ಘಟನೆ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ, ಪೊಲೀಸರು ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details