ರಾಯಚೂರು: ತುಂಗಭದ್ರಾ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಯದಿಂದ ನೀರು ಹರಿಯಬಿಡಲಾಗಿದೆ. ಇದರಿಂದಾಗಿ ಜಿಲ್ಲೆಯ ಎಡಭಾಗದಲ್ಲಿ ಬರುವ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕಿನ 30 ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ.
ಈ ಮೂವತ್ತು ಹಳ್ಳಿಗಳ ಪೈಕಿ 10 ಪ್ರವಾಹಕ್ಕೆ ಸಿಲುಕಿದ್ದು, ಉಳಿದ 20 ಗ್ರಾಮಗಳು 2009ರಲ್ಲಿ ಜಿಲ್ಲೆಗೆ ಅಪ್ಪಳಿಸಿದ ನೆರೆಹಾವಳಿಗೆ ಸ್ಥಳಾಂತರಗೊಂಡಿವೆ. ಆದ್ರೆ, ಕೆಲ ಗ್ರಾಮಗಳ ಜನರನ್ನು ಇನ್ನೂ ಶಿಫ್ಟ್ ಮಾಡಲಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಜನರಿಗೆ ಡಂಗುರ ಸಾರುವ ಮೂಲಕ ನದಿಗೆ ತೆರಳದಂತೆ ಎಚ್ಚರಿಕೆ ನೀಡಿದೆ.