ಕರ್ನಾಟಕ

karnataka

ETV Bharat / state

ರಾಯಚೂರು: ತಂಗಿಯ ಗಂಡನ ಮನೆಗೆ ನ್ಯಾಯ ಕೇಳಲು ಹೋದ ವ್ಯಕ್ತಿಯ ಕೊಲೆ ಶಂಕೆ - raichur murder case

ಆನಂದ ತನ್ನ ತಂಗಿ ಚಾಂದಿನಿಯನ್ನು ಮೌನೇಶ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದ. ಆದ್ರೆ ಮೌನೇಶ್ ತನ್ನ ತಂಗಿಗೆ ತೊಂದರೆ ಕೊಡುತ್ತಿದ್ದಾನೆಂದು ಆಕೆಯ ಅಣ್ಣ ನ್ಯಾಯ ಕೇಳಲು ಹೋದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಆತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

The murder of who went to seek justice for his sister's husband
ರಾಯಚೂರು: ತಂಗಿಯ ಗಂಡನ ಮನೆಗೆ ನ್ಯಾಯ ಕೇಳಲು ಹೋದ ಅಣ್ಣನ ಕೊಲೆ ಆರೋಪ

By

Published : Sep 27, 2020, 10:11 AM IST

ರಾಯಚೂರು: ತಂಗಿಯ ಗಂಡನ ಮನೆಗೆ ನ್ಯಾಯ ಕೇಳಲು ಹೋದಾಗ ಆಕೆಯ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.

ಆನಂದ(32) ಮೃತ ವ್ಯಕ್ತಿ. ಆನಂದ ತನ್ನ ತಂಗಿ ಚಾಂದಿನಿಯನ್ನು ಮೌನೇಶ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದ. ಆದ್ರೆ ಮೌನೇಶ್​​ ತನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಚಾಂದಿನಿ ತನ್ನ ಕುಟುಂಬದವರಿಗೆ ತಿಳಿಸಿದ್ದಾರೆ. ಆಗ ಆಕೆ ಅಣ್ಣ ಆನಂದನು ಮೌನೇಶ್ ಮನೆಗೆ ನ್ಯಾಯ ಕೇಳಲು ತೆರಳಿದ್ದಾರೆ. ಈ ವೇಳೆ ಮೌನೇಶ್ ಹಾಗೂ ಆತನ ಕುಟುಂಬದವರು ಆನಂದನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಇದರಿಂದ ಆನಂದ ಮೃತಪಟ್ಟಿದ್ದಾರೆಂದು ಆರೋಪಿಸಲಾಗಿದೆ.

ಈ ಕುರಿತು ಸದ್ಯ ಸಿಂಧನೂರು ಗ್ರಾಮೀಣ‌ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details