ರಾಯಚೂರು: ಜಿಲ್ಲೆಯಲ್ಲಿ ಸ್ನೇಕ್ ಪಾರ್ಕ್ ಸ್ಥಾಪಿಸುವಂತೆ ಫ್ರೆಂಡ್ಸ್ ವೈಲ್ಡ್ ಲೈಫ್ ರೆಸ್ಕ್ಯೂ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಅಫ್ಸರ್ ಹುಸೇನ್ ಒತ್ತಾಯಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಭೂಮಿಯಲ್ಲಿ ಮನುಷ್ಯರಂತೆ ಹಾವುಗಳೂ ಜೀವಿಸುತ್ತಿವೆ. ಒಂದು ವೇಳೆ ಹಾವುಗಳು ಇಲ್ಲದಿದ್ದರೆ ಮನುಷ್ಯನಿಗೂ ಭೂಮಿಯಲ್ಲಿ ವಾಸಿಸಲು ಕಷ್ಟವಾಗುತ್ತಿತ್ತು ಎಂದಿದ್ದಾರೆ.
ಜನರು ಹಾವು ಕಂಡರೆ ಹೊಡೆದು ಕೊಲ್ಲುತ್ತಾರೆ. ಆದರೆ ಹಾವುಗಳನ್ನು ಕೊಲ್ಲಬೇಡಿ. ಹಾವು ಹಿಡಿಯುವ ನೈಪುಣ್ಯ ಹೊಂದಿದವರಿಗೆ ಕರೆ ಮಾಡಿ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಕೆಲಸ ಮಾಡಬೇಕು ಎಂದರು.