ಕರ್ನಾಟಕ

karnataka

ETV Bharat / state

ರಾಯಚೂರು: ಗಾಯಗೊಂಡ ಹಾವು ರಕ್ಷಿಸಿದ ಉರಗತಜ್ಞ... ಆಸ್ಪತ್ರೆಯಲ್ಲಿ ನಡೀತು ಸರ್ಜರಿ!

ಮಾನ್ವಿ ತಾಲೂಕಿನಲ್ಲಿ ಉರಗ ರಕ್ಷಕರೊಬ್ಬರು ಗಾಯಗೊಂಡು ನರಳುತ್ತಿರುವ ಹಾವು ರಕ್ಷಿಸಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಹಾವು ಇದೀಗ ಚೇತರಿಸಿಕೊಳ್ಳುತ್ತಿದ್ದು, ತದನಂತರ ಅರಣ್ಯಕ್ಕೆ ಬಿಡುವುದಾಗಿ ಉರಗತಜ್ಞ ತಿಳಿಸಿದ್ದಾರೆ.

By

Published : Jul 23, 2022, 7:52 PM IST

Updated : Jul 23, 2022, 10:34 PM IST

snake rescue
ಹಾವಿನ ರಕ್ಷಣೆ

ರಾಯಚೂರು: ಉರಗ ರಕ್ಷಕರೊಬ್ಬರು ಗಾಯಗೊಂಡಿರುವ ಹಾವನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರಗೆ ಕರೆದೊಯ್ದಿರುವ ಘಟನೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕರಡಿಗುಡ್ಡ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಾಗರಹಾವು ಸಿಲುಕಿ ಗಾಯಗೊಂಡಿತ್ತು. ಈ ಕುರಿತು ಮಾಹಿತಿ ಪಡೆದ ಉರಗ ರಕ್ಷಕ ರಮೇಶ ಸ್ಥಳಕ್ಕೆ ಬಂದು, ಹಾವನ್ನು ರಕ್ಷಿಸಿ ಪಟ್ಟಣದ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಗಾಯಗೊಂಡ ಹಾವಿಗೆ ಚಿಕಿತ್ಸೆ

ಇನ್ನು ವೈದ್ಯರಾದ ಡಾ.ರಾಜು ಕಂಬಳೆ, ಹಾವಿಗೆ ಅರವಳಿಕೆ ಮದ್ದು ನೀಡಿ, ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಾಜು ವಿಷಪೂರಿತ ಹಾವಿಗೆ ಚಿಕಿತ್ಸೆ ನೀಡಿರುವುದು ಜೀವನದಲ್ಲಿ ಇದೇ ಪ್ರಥಮ ಹಾಗೂ ಹೊಸ ಅನುಭವ ನೀಡಿದೆ‌. ಚಿಕಿತ್ಸೆ ವೇಳೆ ಹಾವು ಕಚ್ಚದಂತೆ ಜಾಗ್ರತೆ ವಹಿಸಿಲಾಗಿದೆ. ನಾಗರ ಹಾವು ತಲೆ ಭಾಗದ ಹತ್ತಿರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.

ಸದ್ಯ ರಮೇಶ್​ ಅವರು ತಮ್ಮ ಮನೆಯಲ್ಲಿ ಹಾವು ಆರೈಕೆ ಮಾಡುತ್ತಿದ್ದು, 10 ದಿನಗಳಾದ ನಂತರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಆ ಮಹಾ ನಾಯಕನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇ‌ನೆ: ನವ್ಯಾಶ್ರೀ ಆರೋಪ

Last Updated : Jul 23, 2022, 10:34 PM IST

ABOUT THE AUTHOR

...view details