ಕರ್ನಾಟಕ

karnataka

ETV Bharat / state

ಧರ್ಮದ ಹಂಗಿಲ್ಲ, ಸಾಮರಸ್ಯಕ್ಕೆ ಕುಂದಿಲ್ಲ.. ಹಿಂದೂ ಮುಸ್ಲಿಂ ಮುತ್ತೈದೆಯರಿಗೆ ಉಡಿ ತುಂಬಿ ಭಾವೈಕ್ಯತೆ ಮೆರೆದ ಸಿದ್ಧಾಶ್ರಮ - ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ ಗ್ರಾಮದ ಬಂಗಾರಿ ಕ್ಯಾಂಪ್‌ನ ಶ್ರೀಸಿದ್ಧಾಶ್ರಮದಲ್ಲಿ ಶ್ರೀಗಣೇಶ, ಗಾಯಿತ್ರಿ ದೇವಿಯ ರಥೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಹಾಗೂ 2551 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

udi to hindu muslim women
ಹಿಂದೂ ಮುಸ್ಲಿಂ ಮುತ್ತೈದೆಯರಿಗೆ ಉಡಿ ತುಂಬಿ ಭಾವೈಕ್ಯತೆ ಮೆರೆದ ಸಿದ್ಧಾಶ್ರಮ

By

Published : Dec 14, 2022, 10:52 AM IST

ಹಿಂದೂ ಮುಸ್ಲಿಂ ಮುತ್ತೈದೆಯರಿಗೆ ಉಡಿ ತುಂಬಿ ಭಾವೈಕ್ಯತೆ ಮೆರೆದ ಸಿದ್ಧಾಶ್ರಮ

ರಾಯಚೂರು: ಸಾಮಾನ್ಯವಾಗಿ ಹಿಂದೂ ಧರ್ಮದ ಆಚರಣೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬುವುದನ್ನು ಕಾಣುತ್ತೇವೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.

ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ ಗ್ರಾಮದ ಬಳಿ ಬರುವ ಬಂಗಾರಿ ಕ್ಯಾಂಪಿನ ಶ್ರೀಸಿದ್ಧಾಶ್ರಮದ ಶ್ರೀಗಣೇಶ, ಗಾಯಿತ್ರಿ ದೇವಿಯ ರಥೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಮದ ನಿಮಿತ್ತವಾಗಿ 2,551 ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂ ಮಹಿಳೆಯರಿಗೆ ಉಡಿ ತುಂಬುವುದಷ್ಟೇ ಅಲ್ಲದೆ, ಮುಸ್ಲಿಂ ಸಮುದಾಯದ ಮಹಿಳೆಯರಿಗೂ ಸಹ ಉಡಿತುಂಬುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಯಿತು.

"ಮೊದಲು ಎಲ್ಲಾ ಮಹಿಳೆಯರಿಗೂ ಶ್ರೀಸಿದ್ಧಾಶ್ರಮದಿಂದ ಸೀರೆಯನ್ನು ನೀಡಲಾಯಿತು. ಸೀರೆ ಧರಿಸಿದ ಬಳಿಕ ಅಕ್ಕಿ, ಅರಿಶಿಣ, ಕುಂಕುಮ, ಒಣ ಕೊಬ್ಬರಿ, ಬಟ್ಟಲು, ಉತ್ತತ್ತಿ, ಅಡಿಕೆ ಸೇರಿದಂತೆ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಅಲ್ಲದೇ, ಸಿದ್ಧಾಶ್ರಮದ ಸ್ವಾಮೀಜಿಗಳಿಗೆ ಜಾತಿ, ಮತ ಧರ್ಮ ಎನ್ನುವ ಭೇದವಿಲ್ಲ. ಎಲ್ಲರೂ ಒಂದೇ ಎನ್ನುವ ಬುದ್ಧಿ ಮಾತನ್ನು ಹೇಳುವ ಮೂಲಕ ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ" ಎಂದು ಉಡಿ ತುಂಬಿಸಿಕೊಂಡ ಮುಸ್ಲಿಂ ಮಹಿಳೆ ಮೌಲಾಬಿ ತಮ್ಮ ಸಂತಸ ಹಂಚಿಕೊಂಡರು.

ಇದನ್ನೂ ಓದಿ:ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ ಶ್ರೀವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಹಾಗೂ ಸಿದ್ಧಾಶ್ರಮದ ಪೀಠಾಧಿಪತಿ ಸದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಹರಗುರು-ಚರಮೂರ್ತಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು, ಗಣ್ಯರು ಪಾಲ್ಗೊಂಡರು.

ಇದನ್ನೂ ಓದಿ:ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಹೊರಟ ಮುಸ್ಲಿಂ ಮಾಲಾಧಾರಿ..

ABOUT THE AUTHOR

...view details