ಕರ್ನಾಟಕ

karnataka

By

Published : Jan 2, 2021, 9:55 PM IST

ETV Bharat / state

ಕುರುಬ ಎಸ್​ಟಿ ಮೀಸಲಾತಿ ಹೋರಾಟಕ್ಕೆ ಸಿದ್ಧರಾಮಯ್ಯ ಬೆಂಬಲವಿದೆ: ಕೆ.ಬಸವಂತಪ್ಪ

ಜನವರಿ 15ರಿಂದ ಎಸ್​ಟಿ ಮೀಸಲಾತಿಗಾಗಿ ಕನಕಗುರು ಪೀಠದ ಗುರುಗಳ ಸಾನಿಧ್ಯದಲ್ಲಿ ಬೆಂಗಳೂರುವರೆಗೆ ಪಾದಯಾತ್ರೆ ಆರಂಭಿಸುತ್ತೇವೆ. ಫೆಬ್ರವರಿ 7ಕ್ಕೆ ರಾಜ್ಯಮಟ್ಟದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ ಎಂದು ರಾಯಚೂರು ಕುರುಬರ ಜಿಲ್ಲಾ ಘಟಕ ಅಧ್ಯಕ್ಷ ಕೆ. ಬಸವಂತಪ್ಪ ಹೇಳಿದ್ದಾರೆ.

K.Basawanthappa
ಕುರುಬ ಎಸ್​ಟಿ ಮೀಸಲಾತಿ ಹೋರಾಟಕ್ಕೆ ಸಿದ್ಧರಾಮಯ್ಯ ಬೆಂಬಲವಿದೆ ಎಂದ ಕೆ.ಬಸವಂತಪ್ಪ

ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ಕುರುಬರ ಪರಿಶಿಷ್ಟ ಪಂಗಡ ಸೇರ್ಪಡೆ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಬಲವಿದೆ ಎಂದು ಕುರುಬರ ಜಿಲ್ಲಾ ಘಟಕ ಅಧ್ಯಕ್ಷ ಕೆ. ಬಸವಂತಪ್ಪ ಹೇಳಿದರು.

ಕುರುಬ ಎಸ್​ಟಿ ಮೀಸಲಾತಿ ಹೋರಾಟಕ್ಕೆ ಸಿದ್ಧರಾಮಯ್ಯ ಬೆಂಬಲವಿದೆ ಎಂದ ಕೆ.ಬಸವಂತಪ್ಪ

ನಗರದಲ್ಲಿ ಮಾತನಾಡಿದ ಅವರು, ಎಸ್​ಟಿ ಮೀಸಲು ಹೋರಾಟ ಆರಂಭಕ್ಕೆ ಮುಂಚೆ ಸಿದ್ಧಾರಮಯ್ಯರನ್ನು ಖುದ್ದು ಭೇಟಿ ಮಾಡಿದ ನಿಯೋಗದಲ್ಲಿ ನಾನೂ ಇದ್ದೆ. ರಾಜಕೀಯ ಹಿತದೃಷ್ಟಿಯಿಂದ ಪರೋಕ್ಷವಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಅದಕ್ಕೂ ಮುಂಚಿತವಾಗಿ ಜ.4ರಂದು ಸಿಂಧನೂರಿನಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ.

ನಾವು ಯಾವುದೇ ಕೋಮಿನ ವಿರುದ್ಧ ಹೋರಾಟ ಮಾಡುತ್ತಿಲ್ಲ. ಗುಡ್ಡಗಾಡುಗಳಲ್ಲಿ ಶತಮಾನದಿಂದ ಸಂಕಷ್ಟದ ಬದುಕು ಕಟ್ಟಿಕೊಂಡು ಬಂದ ನಮ್ಮವರ ಹಕ್ಕು ರಕ್ಷಣೆಯ ಗುರಿ ಹೊಂದಿದ್ದೇವೆ. ಕಾರಣ ರಾಜ್ಯದ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details