ರಾಯಚೂರು:ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಮನ್ಸಲಾಪುರ ಗ್ರಾಮದ ಶಿವಣ್ಣ ಅಭಿಮಾನಿ ಬಳಗದವರು ಆಚರಿಸಿದ್ರು.
ರಾಯರ ಸನ್ನಿಧಿಯಲ್ಲಿ ಶಿವಣ್ಣನ ಜನ್ಮದಿನ; ಅಭಿಮಾನಿಗಳ ಸಂಭ್ರಮ - undefined
57 ನೇ ವಸಂತಕ್ಕೆ ಕಾಲಿಟ್ಟಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಆಚರಿಸಿ ಖುಷಿ ಪಟ್ಟರು.
![ರಾಯರ ಸನ್ನಿಧಿಯಲ್ಲಿ ಶಿವಣ್ಣನ ಜನ್ಮದಿನ; ಅಭಿಮಾನಿಗಳ ಸಂಭ್ರಮ](https://etvbharatimages.akamaized.net/etvbharat/prod-images/768-512-3822136-thumbnail-3x2-rch.jpg)
ಅಭಿಮಾನಿಗಳಿಂದ ಶಿವಣ್ಣನ ಜನ್ಮದಿನಾಚರಣೆ
ಅಭಿಮಾನಿಗಳಿಂದ ಶಿವಣ್ಣನ ಜನ್ಮದಿನಾಚರಣೆ
ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದ ಶಿವಣ್ಣ ಅಭಿಮಾನಿ ಬಳಗ, ಶ್ರೀರಾಘವೇಂದ್ರ ಸ್ವಾಮಿ ಸನ್ನಿಧಾನಕ್ಕೆ ತೆರಳಿ ವಿಶೇಷ ಪೂಜೆ ಮತ್ತು ಬಡ ಜನರಿಗೆ ಹಣ್ಣು-ಹಂಪಲು ವಿತರಣೆ ಮಾಡುವ ಮೂಲಕ ಆಚರಿಸಿದ್ರು. ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಆದಷ್ಟು ಬೇಗ ಗುಣಮುಖವಾಗಲಿ ಎಂದು ಅಭಿಮಾನಿಗಳು ಬೇಡಿಕೊಂಡರು.