ಕರ್ನಾಟಕ

karnataka

ಲಿಂಗಸುಗೂರು: ವಾರದ ಬಳಿಕ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತ

By

Published : Aug 23, 2020, 11:29 AM IST

ಒಂದು ವಾರದಿಂದ ಮುಳುಗಡೆಯಾಗಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ.

Sheelahalli bridge
Sheelahalli bridge

ಲಿಂಗಸುಗೂರು: ಕೃಷ್ಣಾ ಪ್ರವಾಹದಿಂದ ಮುಳುಗಡೆ ಆಗಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಒಂದು ವಾರದಿಂದ ನಾರಾಯಣಪುರ ಅಣೆಕಟ್ಟೆ ಮೂಲಕ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಸೇತುವೆ ಮುಳುಗಡೆ ಆಗಿತ್ತು. ನಾರಾಯಣಪುರ ಅಣೆಕಟ್ಟೆ ನೀರಿನ ಮಟ್ಟ 490.590 ಮೀಟರ್ ಕಾಯ್ದುಕೊಂಡು ಹೆಚ್ಚುವರಿ 1,27,680 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆ ಎಂಜಿನಿಯರ್‌ ವಿಜಯಕುಮಾರ ಹಳ್ಳಿ ತಿಳಿಸಿದ್ದಾರೆ.

ABOUT THE AUTHOR

...view details