ಕರ್ನಾಟಕ

karnataka

ETV Bharat / state

ಪೊಲೀಸ್​​​ ಠಾಣೆ‌ಯಲ್ಲಿ ಶಾಂತಿಸಭೆ-ಇಫ್ತಾರ್​​ ಕೂಟ - undefined

ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದರ್‌ ಬಜಾರ್ ಪೊಲೀಸ್​ ಠಾಣೆ‌ಯಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.

ಪೊಲೀಸ್​ ಠಾಣೆ‌ಯಲ್ಲಿ ಇಫ್ತಾರ್ ಕೂಟ

By

Published : Jun 3, 2019, 8:07 AM IST

ರಾಯಚೂರು: ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದರ್‌ ಬಜಾರ್ ಪೊಲೀಸ್​ ಠಾಣೆ‌ಯಲ್ಲಿ ಶಾಂತಿಸಭೆ ಹಾಗೂ ಇಫ್ತಾರ್ ಕೂಟ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕಿಶೋರ್‌ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಆಚರಣೆ ವೇಳೆ ಯಾವುದೇ ಅಡೆತಡೆಗಳು ಆಗದೆ ಶಾಂತಿ-ಸೌಹಾರ್ದತೆಯಿಂದ ಯಶ್ವಸಿಗೊಳಿಸುವಂತೆ ಮನವಿ ಮಾಡಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಪೊಲೀಸ್​ ಠಾಣೆ‌ಯಲ್ಲಿ ಇಫ್ತಾರ್ ಕೂಟ

ಇಫ್ತಾರ್‌ ಕೂಟ:

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸದರ್‌ ಬಜಾರ್ ಠಾಣೆಯ ಸಿಪಿಐ ಸಾಲಿಮಠ, ಪಿಎಸ್‌ಐ ಉಮೇಶ್ ಕಾಂಬೆಳ್ಳಯವರ ನೇತೃತ್ವದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಸೌಹಾರ್ದತೆಯ ಪ್ರತೀಕವಾಗಿ ಏರ್ಪಡಿಸಿರುವ ಕೂಟದಲ್ಲಿ ಮುಸ್ಲಿಂ ಬಾಂಧವರು ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು, ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವ ಮೂಲಕ ಸೌಹಾರ್ದತೆ ಸಾರಿದರು.

For All Latest Updates

TAGGED:

ABOUT THE AUTHOR

...view details