ಕರ್ನಾಟಕ

karnataka

ETV Bharat / state

ವರುಣನ ಕೃಪೆಗಾಗಿ ದೇವರ ಮೊರೆ ಹೋದ ಶಾಲಾ ಮಕ್ಕಳು

ರಾಯಚೂರು ಜಿಲ್ಲೆಯಲ್ಲಿ ವರುಣನಿಗಾಗಿ ಪ್ರಾರ್ಥಿಸಿ ಶಾಲಾ ಮಕ್ಕಳು ದೇವರ ಮೊರೆ ಹೋಗಿದ್ದಾರೆ. ಮುನಿಸಿಕೊಂಡಿರುವ ವರುಣ ಕೃಪೆ ತೋರಲಿ ಎಂದು ಮಕ್ಕಳು ಪ್ರಾರ್ಥಿಸಿದ್ದಾರೆ.

By

Published : Jun 20, 2019, 7:05 PM IST

ಶಾಲಾ ಮಕ್ಕಳು

ರಾಯಚೂರು:ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಮಳೆಗಾಗಿ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ದೇವರಿಗೆ ವಿಶೇವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

ನಗರದ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ಇಂದು ಬೆಳಗ್ಗೆ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜನ, ಜಾನುವಾರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ವರುಣದೇವ ಧರೆಗಿಳಿಯಲಿ ಎಂದು ಮಕ್ಕಳು ಶಿವನ ಫೋಟೊ ಎದುರು ಪ್ರಾರ್ಥಿಸಿದರು. ಶಾಲೆಯ ಸಿಬ್ಬಂದಿ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details