ಕರ್ನಾಟಕ

karnataka

ಸ್ವಗ್ರಾಮಕ್ಕೆ ಹಿಂತಿರುಗಿದ ಕಾರ್ಮಿಕರು : ಮನೆಯರಲ್ಲಿ ಮುಖದಲ್ಲಿ ಸಂತಸ

ಬೆಂಗಳೂರು, ರಾಮನಗರ ಸೇರಿದಂತೆ ಇತರೆ ಭಾಗಗಳಲ್ಲಿ ಸಿಲುಕಿಕೊಂಡಿದ್ದ ರಾಯಚೂರಿನ ಬೇರೆ ಬೇರೆ ಭಾಗದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿರುವ ಸಾರಿಗೆ ಬಸ್​ಗಳ ಸಂಚಾರ ಕಂಡು ಬಂತು.

By

Published : Apr 25, 2020, 1:52 PM IST

Published : Apr 25, 2020, 1:52 PM IST

richur labours
ಸ್ವಗ್ರಾಮಕ್ಕೆ ಹಿಂತಿರುಗಿದ ಕಾರ್ಮಿಕರು

ರಾಯಚೂರು :ಲಿಂಗಸುಗೂರು, ಮಸ್ಕಿ ತಾಲೂಕಿನಿಂದ ವಿವಿಧ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋಗಿ ಕೂಲಿ ಕಾರ್ಮಿಕರು ಲಾಕ್​ಡೌನ್​ಲ್ಲಿ ಸಿಲುಕಿಕೊಂಡಿದ್ದರು. ಇದೀಗ ಸರ್ಕಾರ ಅವರನ್ನು ಊರಿಗೆ ಕರೆತಂದು ಬಿಡುತ್ತಿರುವುದು ಕುಟುಂಬಸ್ಥರಲ್ಲಿ ಹರ್ಷ ಮೂಡಿಸಿದೆ.

ಶುಕ್ರವಾರ ರಾತ್ರಿ ಬಳ್ಳಾರಿಯಲ್ಲಿ ಸಿಲುಕಿಕೊಂಡಿದ್ದ ಲಿಂಗಸುಗೂರು ತಾಲೂಕಿನ ಊಟಿ ಚೆನ್ನಪ್ಪನದೊಡ್ಡಿ ಅಮರೇಶ ಭೀಮಣ್ಣ ಎಂಬುವವರ ಕುಟುಂಬವನ್ನು ಕರೆತಂದು ಗುರುಗುಂಟಾಕ್ಕೆ ಇಳಿಸಲಾಯಿತು. ನಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕೆಲ ದಿನಗಳ ಕಾಲ ಅನಗತ್ಯವಾಗಿ ಹೊರಗೆ ತಿರುಗಾಡದಂತೆ ಎಚ್ಚರಿಕೆ ನೀಡಿ ಆಟೋ ಮೂಲಕ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಬೆಂಗಳೂರು, ರಾಮನಗರ ಸೇರಿದಂತೆ ಇತರ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ಬೇರೆ ಬೇರೆ ಭಾಗದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿರುವ ಸಾರಿಗೆ ಬಸ್​ಗಳ ಸಂಚಾರ ಕೂಡ ಕಂಡು ಬಂತು.

ವಲಸೆ ಮತ್ತು ಕೂಲಿ ಕಾರ್ಮಿಕರನ್ನು ರಾಜ್ಯದೊಳಗೆ ಸ್ಥಳಾಂತರಿಸಲು ಅವಕಾಶ ಮಾಡಿಕೊಟ್ಟ ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿವಿಧೆಡೆ ತೆರಳಿದ್ದ ಕಾರ್ಮಿಕರನ್ನು ಕರೆ ತರಲಾಗುತ್ತಿದೆ ಎಂದು ತಾಲೂಕು ಆಡಳಿತ ದೃಢಪಡಿಸಿದೆ.

ABOUT THE AUTHOR

...view details