ಕರ್ನಾಟಕ

karnataka

ETV Bharat / state

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ.. ಮುಸ್ಲಿಮರಲ್ಲೇ ಹೆಚ್ಚಿನ ಸಂಭ್ರಮ! - ಮುಸ್ಲಿಮರಲ್ಲೇ ಹೆಚ್ಚಿನ ಸಂಭ್ರಮ!

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಆಚರಣೆಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಲಿಂಗಸೂಗೂರಿನ ರಾಮ್-ರಹೀಮ್ ಯುವಕ ಮಂಡಳ ಸ್ಥಾಪಿಸಲ್ಪಟ್ಟಿರುವ ರಾಮ್-ರಹೀಮ್ ಗಣಪತಿಯೇ ಸಾಕ್ಷಿ.

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ

By

Published : Sep 4, 2019, 7:07 PM IST

ರಾಯಚೂರು:ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಆಚರಣೆಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಲಿಂಗಸೂಗೂರಿನ ರಾಮ್-ರಹೀಮ್ ಯುವಕ ಮಂಡಳ ಸ್ಥಾಪಿಸಲ್ಪಟ್ಟಿರುವ ರಾಮ್-ರಹೀಮ್ ಗಣಪತಿಯೇ ಸಾಕ್ಷಿ.

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ..

ದೇವರು ಅನ್ನೋದು ನಂಬಿಕೆ. ನಂಬಿಕೆ ಅನ್ನೋದೇ ಶಕ್ತಿ, ಅದೇ ಭಕ್ತಿ. ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಭಕ್ತಿ, ನಂಬಿಕೆಗಳಿರುತ್ತವೆ. ಆದರೆ, ಧ್ಯೇಯ ಒಂದೇ ಅಲ್ವೇ.. ಅದನ್ನ ಲಿಂಗಸೂಗೂರಿನ ಪಟ್ಟಣದ ಪುರಸಭೆ ಆವರಣದ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ರಾಮ್-ರಹೀಮ್ ಗಣಪತಿ ಸಾರಿ ಸಾರಿ ಹೇಳುತ್ತಿದೆ. ಕೋಮು ಸೌಹಾರ್ದಕ್ಕೆ ಈ ಗಣಪ ಒಂದ್ರೀತಿ ಮುನ್ನುಡಿ ಬರೆಯುತ್ತಿದ್ದಾನೆ.

ರಾಮ್-ರಹೀಮ್ ಯುವಕ ಮಂಡಳಿಯಲ್ಲಿ ಮುಸ್ಲಿಂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಮತ್ತೊಂದು ವಿಶೇಷವೇ ಸರಿ. ಹಿಂದೂ ಸಂಪ್ರದಾಯದ ಹಬ್ಬಗಳನ್ನೂ ಕೂಡ ಆಚರಿಸುತ್ತಾ ತಮ್ಮ ಸೌಹಾರ್ದತೆಯನ್ನ, ಸಹೃದಯ ಗುಣವನ್ನೇ ಇಡೀ ನಾಡಿಗೆ ತಿಳಿಸುತ್ತಿದ್ದಾರೆ. ಯಾರೋ ಕಿಡಿಗೇಡಿಗಳಿಂದ ಧರ್ಮಗಳ ನಡುವೆ ನಡೆಯುವ ಘರ್ಷಣೆಗಳಿಂದ ಹೊರಬಂದು ಈ ರೀತಿ ಕೋಮು ಸಾಮರಸ್ಯದ ಭಾವನೆ ಬೆಳೆಸಿಕೊಳ್ಳುವುದು ನಿಜಕ್ಕೂ ಒಳ್ಳೇಯ ಬೆಳವಣಿಗೆ. ಈ ರೀತಿಯ ಮನೋಭಾವ ಹೆಚ್ಚೆಚ್ಚು ಬೆಳಯಬೇಕಾಗಿದೆ. ಆಗ ಸಮಾಜದಲ್ಲಿನ ಸೋದರತೆ, ಸಾಮರಸ್ಯ ಬೆಳೆಯುತ್ತೆ ಅಂತಾರೆ ಇಲ್ಲಿನ ಪಿಎಸ್​ಐ ಪ್ರಕಾಶ ಡಂಬಳ.

ಈಶ್ವರ ಅಲ್ಲಾ ತೇರೆ ನಾಮ್‌ ಸಬ್ಕೋ ಸನ್ಮತಿ ದೇ ಭಗವಾನ್‌ ಅಂತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯೂ ಕೂಡ ಪದೇಪದೆ ಹಾಡುತ್ತಿದ್ದರು. ಹಿಂದೂ- ಮುಸ್ಲಿಂ ಬಾಂಧವರು ಒಟ್ಟೊಟ್ಟಾಗಿ ಗಣೇಶ ಹಬ್ಬ ಆಚರಿಸುವ ಮೂಲಕ ಗಾಂಧಿ ಕಂಡ ಕನಸನ್ನ ನನಸು ಮಾಡ್ತಿದಾರೆ. ಜಾತಿ, ಧರ್ಮಗಳ ಹಂಗಿರದೇ ಒಂದಾಗಿ ಬಾಳ್ತಿದಾರೆ. ಇತರ ಯುವಕರಿಗೂ ಇವರ ನಡೆ ಆದರ್ಶಪ್ರಾಯ.

ABOUT THE AUTHOR

...view details