ಕರ್ನಾಟಕ

karnataka

By

Published : Jan 7, 2021, 3:39 PM IST

Updated : Jan 7, 2021, 4:38 PM IST

ETV Bharat / state

ರಾಯಚೂರಿನಲ್ಲಿ ತುಂತುರು ಮಳೆ: ಫಸಲಿಗೆ ಕೀಟಬಾಧೆ ಎದುರಾಗುವ ಭೀತಿಯಲ್ಲಿ ರೈತ

ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿರುವಂತಹ ಕಡಲೆ, ಬಿಳಿ ಜೋಳ, ಮೆಣಸಿನಕಾಯಿ ಹಾಗೂ ಸಜ್ಜೆ ಸೇರಿದಂತೆ ನಾನಾ ಬೆಳೆಗಳ ಫಸಲು ಬಂದಿದೆ. ನಿನ್ನೆಯಿಂದ ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದ್ದು, ಇದರಿಂದ ಕೀಟಬಾಧೆ ಎದುರಾಗುವ ಭೀತಿಯಲ್ಲಿ ರೈತನಿದ್ದಾನೆ.

ಫಸಲಿಗೆ ಕೀಟಬಾಧೆ ಎದುರಾಗುವ ಭೀತಿಯಲ್ಲಿ ರೈತ
ಫಸಲಿಗೆ ಕೀಟಬಾಧೆ ಎದುರಾಗುವ ಭೀತಿಯಲ್ಲಿ ರೈತ

ರಾಯಚೂರು: ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ತುಂತುರು ಮಳೆಯಿಂದ ಹಿಂಗಾರು ಬಿತ್ತನೆ ಮಾಡಿರುವ ತೊಗರಿ, ಹತ್ತಿ, ಕಡಲೆ, ಬಿಳಿ ಜೋಳ, ಮೆಣಸಿಕಾಯಿ ಬೆಳೆಗಳಿಗೆ ರೋಗ, ಕೀಟಬಾಧೆ ಎದುರಾಗುವ ಭೀತಿ ರೈತರಲ್ಲಿ ಉಂಟಾಗಿದೆ.

ಫಸಲಿಗೆ ಕೀಟಬಾಧೆ ಎದುರಾಗುವ ಭೀತಿಯಲ್ಲಿ ರೈತ

ಈಗಾಗಲೇ ರೈತರು ಬಿತ್ತನೆ ಮಾಡಿರುವಂತಹ ಕಡಲೆ, ಬಿಳಿ ಜೋಳ, ಮೆಣಸಿನಕಾಯಿ ಹಾಗೂ ಸಜ್ಜೆ ಸೇರಿದಂತೆ ನಾನಾ ಬೆಳೆಗಳ ಫಸಲು ಬಂದಿದೆ. ನಿನ್ನೆಯಿಂದ ತುಂತುರು ಮಳೆ ಸುರಿಯುತ್ತಿದ್ದು, ಇದರಿಂದ ರಾಶಿ ನಡೆಯುತ್ತಿರುವ ತೊಗರಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಫಸಲು ಬಂದು ನಿಂತಿರುವ ಬಿಳಿ ಜೋಳ, ಕಡಲೆ, ಮೆಣಸಿನಕಾಯಿ, ಸಜ್ಜೆ ಬೆಳೆಗಳಿಗೆ ರೋಗ ಹಾಗೂ ಕೀಟಬಾಧೆ ತಗುಲುವ ಆತಂಕ ರೈತರಿಗೆ ಎದುರಾಗಿದೆ.

ಓದಿ:ಎನ್‌ಆರ್‌ಬಿಸಿ ಕಾಲುವೆ ನಿರ್ಮಾಣ ವಿಚಾರ: ತಾಂತ್ರಿಕ ತಜ್ಞರ ಸಮಿತಿ ರಚನೆಗೆ ಅನುಮೋದನೆ

ಜಿಲ್ಲೆಯ ಮುಂಗಾರು ಹಂಗಾಮಿಗೆ 1,02,802 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿಳಿ ಜೋಳ 80,917 ಹೆಕ್ಟೇರ್​, ಕಡಲೆ 98,514 ಹೆಕ್ಟೇರ್​​​ ಪ್ರದೇಶ ಹಾಗೂ ಇತರೆ ವಿವಿಧ ಬೆಳೆಗಳನ್ನು ಸಾವಿರಾರು ಹೆಕ್ಟೇರ್​​​ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

Last Updated : Jan 7, 2021, 4:38 PM IST

ABOUT THE AUTHOR

...view details