ಕರ್ನಾಟಕ

karnataka

ETV Bharat / state

ಈಜಲು ತೆರಳಿದ ಇಂಜಿನಿಯರ್ ನಾಪತ್ತೆ... ಯೂನಿಫಾರ್ಮ್​ ಪತ್ತೆ - ರಾಯಚೂರು ನಾರಾಯಣಪುರ ಬಲದಂಡೆ ಇಂಜಿನಿಯರ್ ನಾಪತ್ತೆ ಸುದ್ದಿ

ಜಿಲ್ಲೆಯ ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

raichuru-narayanapur-right-bank-engineer-lost
ಈಜಲು ತೆರಳಿದ ಇಂಜಿನಿಯರ್ ನಿಗೂಢವಾಗಿ ನಾಪತ್ತೆ

By

Published : Dec 17, 2019, 4:07 PM IST

ರಾಯಚೂರು: ಈಜಲು ಕಾಲುವೆಗೆ ತೆರಳಿದ್ದ ಇಂಜಿನಿಯರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಸಮೀಪದ ನಾರಾಯಣಪುರ ಬಲದಂಡೆಯಲ್ಲಿ ಈಜಲು ತೆರಳಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮ ನಿವಾಸಿ ದಯಾನಂದ (22) ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಈಜಲು ತೆರಳಿದ ಇಂಜಿನಿಯರ್ ನಿಗೂಢವಾಗಿ ನಾಪತ್ತೆ

ಅಗ್ನಿಶಾಮಕ ದಳದ, ಪೊಲೀಸರು ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ದಯಾನಂದ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಲ್ಲಿ ಇಂಜಿನಿಯರ್ ಸಮವಸ್ತ್ರಗಳು ದೊರತಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details