ಕರ್ನಾಟಕ

karnataka

ಲಾಕ್​ಡೌನ್​ಗೆ ಬೆಂಬಲ: ಅಂಗಡಿ ಬಾಡಿಗೆ ಪಡೆಯಲ್ಲ ಎಂದ ಮಾಲೀಕ!

ರಾಜ್ಯ ಕೊರೊನಾ ಲಾಕ್​ಡೌನ್​ ಏಟಿಗೆ ತತ್ತರಿಸಿದೆ. ದಿನಗೂಲಿ ಕಾರ್ಮಿಕರು, ವ್ಯಾಪಾರಸ್ಥರು ಆರ್ಥಿಕವಾಗಿ ನಲುಗಿ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಯಚೂರಿನ ವಾಣಿಜ್ಯ ಮಳಿಗೆ ಮಾಲೀಕರೊಬ್ಬರು ತಾವು ಬಾಡಿಗೆ ನೀಡಿರುವ ಮಳಿಗೆಗಳ ತಿಂಗಳ ಬಾಡಿಗೆ ತೆಗೆದುಕೊಳ್ಳದೆ ವ್ಯಾಪಾರಸ್ಥರ ಕಷ್ಟಕ್ಕೆ ನೆರವಾಗಿದ್ದಾರೆ.

By

Published : Mar 30, 2020, 8:37 PM IST

Published : Mar 30, 2020, 8:37 PM IST

raichuru-commercial-shop-owner-not-accepting-rent
ಅರಕೇರಾ ಶಿವಶರಣ ಸಾಹುಕಾರ

ರಾಯಚೂರು: ಲಾಕ್‌ಡೌನ್ ಬೆಂಬಲಿಸಿ ಬಂದ್ ಮಾಡಿರುವ ಮಳಿಗೆಗಳ ತಿಂಗಳ ಬಾಡಿಗೆ ತೆಗೆದುಕೊಳ್ಳದಿರೋ ನಿರ್ಧಾರವನ್ನ ಜಿಲ್ಲೆಯ ವಾಣಿಜ್ಯ ಮಳಿಗೆ ಮಾಲೀಕರೊಬ್ಬರು ತೆಗೆದುಕೊಂಡು ಮಾನವೀಯತೆ ಮೆರೆದಿದ್ದಾರೆ.

ಲಾಕ್​ಡೌನ್​ ಹಿನ್ನೆಲೆ 21 ದಿನಗಳ ಕಾಲ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆದ ಹಿನ್ನೆಲೆ ಸಿರವಾರ ಪಟ್ಟಣದ ವಾಣಿಜ್ಯ ಮಳಿಗೆಗಳ ಮಾಲೀಕ ಅರಕೇರಾ ಶಿವಶರಣ ಸಾಹುಕಾರ ಎಂಬುವವರು ಬಾಡಿಗೆ ನೀಡಿರುವ ತಮ್ಮ ಮಳಿಗೆಗಳಿಂದ ತಿಂಗಳ ಬಾಡಿಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಅಂಗಡಿ ಬಾಡಿಗೆ ಬೇಡವೆಂದ ಮಾಲೀಕ

ಬಾಡಿಗೆದಾರರು ತಮ್ಮ ವ್ಯಾಪಾರ-ವಹಿವಾಟಿನಿಂದ ಬಂದ ಆದಾಯದಲ್ಲಿ ಮಳಿಗೆ ಹಾಗೂ ಅಂಗಡಿ ಬಾಡಿಗೆ ಕಟ್ಟಿ ಜೀವನ ಸಾಗಿಸುತ್ತಿದ್ರು. ಆದ್ರೆ ಅಂಗಡಿ ಮುಚ್ಚಿದ ಪರಿಣಾಮ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ನಾವು ಸಹ ಲಾಕ್‌ಡೌನ್ ಬೆಂಬಲಿಸಿದವರ ನೆರವಿಗೆ ಧಾವಿಸಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವಶರಣ ಸಾಹುಕಾರ ತಿಳಿಸಿದ್ದಾರೆ.

ABOUT THE AUTHOR

...view details