ರಾಯಚೂರು :ಸೌದಿಯಿಂದ ಬಂದ ಕೊರೊನಾ ಶಂಕಿತ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಜನರ ಮಧ್ಯೆಯೇ ಓಡಾಡಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.
ಸೌದಿಯಿಂದ ಬಂದ ಕೊರೊನಾ ಶಂಕಿತನ ಓಡಾಟ.. ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ಕೆಲದ ದಿನಗಳ ಹಿಂದೆ ಈತ ಕಲಬುರ್ಗಿ, ಶಹಾಪುರಕಕ್ಕೂ ಕೂಡ ಹೋಗಿ ಬಂದಿದ್ದಾನೆ. ಇದನ್ನು ಕಂಡ ಬಡಾವಣೆ ಜನ ಸಾಕಷ್ಟು ಭಯಗೊಂಡಿದ್ರು.
ಶಕ್ತಿನಗರದ ರಾಘವೇಂದ್ರ ಬಡಾವಣೆಯಲ್ಲಿ ಈ ವ್ಯಕ್ತಿ ಓಡಾಟ ನಡೆಸುತ್ತಿದ್ದ. ಸೌದಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು, ನಂತರ ಅಲ್ಲಿಂದ ರಾಯಚೂರಿನ ಶಕ್ತಿನಗರಕ್ಕೆ ಆಗಮಿಸಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿತ್ತು. ಆದರೆ, ಸೌದಿಯಿಂದ ವ್ಯಕ್ತಿ ನೇರವಾಗಿ ಮನೆಗೆ ಹೋಗಬೇಕು. ಹೊರಗಡೆ ಓಡಾಡಬಾರದೆಂದು ಸೂಚಿಸಲಾಗಿತ್ತು. ಆದ್ರೂ ಈ ವ್ಯಕ್ತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ.
ಅಲ್ಲದೆ ಕೆಲದ ದಿನಗಳ ಹಿಂದೆ ಈತ ಕಲಬುರ್ಗಿ, ಶಹಾಪುರಕಕ್ಕೂ ಕೂಡ ಹೋಗಿ ಬಂದಿದ್ದಾನೆ. ಇದನ್ನು ಕಂಡ ಬಡಾವಣೆ ಜನ ಸಾಕಷ್ಟು ಭಯಗೊಂಡಿದ್ರು. ಆಗ ತಹಶೀಲ್ದಾರ್ ಹಂಪಣ್ಣ ಸಜ್ಜನ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವ್ಯಕ್ತಿಯನ್ನ ವಿಚಾರಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಆದರೆ, ಬಳಿಕ ವ್ಯಕ್ತಿಯ ಮನವೊಲಿಸಿ ಆ್ಯಂಬುಲೆನ್ಸ್ನಲ್ಲಿ ಸ್ಥಳಾಂತರ ಮಾಡಲಾಯ್ತು.