ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಕೆಸರಟ್ಟಿ ಶಾಲೆಯಲ್ಲಿ ಬ್ಯಾಗ್ ರಹಿತ ದಿನವನ್ನಾಗಿ ವಿಶೇಷವಾಗಿ ಆಚರಿಸಲಾಯಿತು.
ಕೆಸರಟ್ಟಿ ಶಾಲೆಯಲ್ಲಿಂದು ಬ್ಯಾಗ್ ರಹಿತ ದಿನ: ಅಮ್ಮಂದಿರ ಗಾನಕ್ಕೆ ಮಕ್ಕಳು ದಿಲ್ ಖುಷ್ - undefined
ನಿತ್ಯ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಭಾರವಾದ ಪುಸ್ತಕಗಳ ತುಂಬಿದ ಬ್ಯಾಗ್ಗಳನ್ನು ಹೊತ್ತು ಹಾಜರಾಗುತ್ತಿದ್ದರು. ಆದರೆ ಇಂದು ರಾಯಚೂರಿನ ಶಾಲೆಯೊಂದರಲ್ಲಿ ಮಕ್ಕಳು ಬ್ಯಾಗ್ ತಂದಿಲ್ಲ ಬದಲಾಗಿ ತಾಯಂದಿರ ಕರೆತಂದು ಗಾಯಕಿಗಳನ್ನಾಗಿಸಿದ್ದಾರೆ.
![ಕೆಸರಟ್ಟಿ ಶಾಲೆಯಲ್ಲಿಂದು ಬ್ಯಾಗ್ ರಹಿತ ದಿನ: ಅಮ್ಮಂದಿರ ಗಾನಕ್ಕೆ ಮಕ್ಕಳು ದಿಲ್ ಖುಷ್](https://etvbharatimages.akamaized.net/etvbharat/prod-images/768-512-3913403-thumbnail-3x2-rcr.jpg)
ನಿತ್ಯ ಮಣಬಾರದ ಬ್ಯಾಗ್ ಹೊತ್ತು ಶಾಲೆಗೆ ಬರುವ ಮಕ್ಕಳು ಇಂದು ಖುಷಿಯಿಂದ ನಗುತ್ತ ಶಾಲೆಗೆ ಬಂದರು. ಬ್ಯಾಗ್, ಪುಸ್ತಕ ಇಲ್ಲದೇ ಶಾಲೆಗೆ ಬಂದ ಮಕ್ಕಳು ದಿನವಿಡೀ ಶಾಲೆಯಲ್ಲಿ ಉತ್ಸಾಹದಿಂದ ಉಳಿಯಲು ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನ ಹಮ್ಮಿಕೊಳ್ಳಲಾಗಿತ್ತು. ಸೋಬಾನ ಪದ, ಜಾನಪದ, ಮತ್ತು ಬೀಸಕಲ್ಲು ಪದಗಳನ್ನ ಹಾಡುವ ತಾಯಂದಿರನ್ನ ಶಾಲೆಗೆ ಕರೆದು ಮಕ್ಕಳ ಮುಂದೆ ಹಾಡಿಸಲಾಯಿತು. ತಮ್ಮೊಳಗಿನ ಪ್ರತಿಭೆ ಈ ರೀತಿಯಾಗಿ ಅನಾವರಣಗೊಂಡಿದ್ದಕ್ಕೆ ತುಂಬಾ ಸಂತಸಗೊಂಡ ತಾಯಂದಿರು ಹಾಡುವುದಷ್ಟೇ ಅಲ್ಲದೇ ಆಸಕ್ತ ಮಕ್ಕಳಿಗೆ ಕಲಿಸುವ ಪ್ರಯತ್ನ ಕೂಡ ಮಾಡಿದರು.
ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸೊಗಡು, ಪರಂಪರೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಗ್ರಾಮೀಣ ಕಲಾವಿದರ ಕಲೆಯಿಂದ ಬೆರಗುಗೊಂಡ ಶಾಲೆಯ ಶಿಕ್ಷಕರು ಅವರ ಪ್ರತಿಭೆಯನ್ನು ಕೊಂಡಾಡಿದರು.