ರಾಯಚೂರು: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ಗಳನ್ನು ತೆಗೆಯುವ ಕಾರ್ಯ ಮುಂದುವರೆದಿದೆ. ಕೇರಳದ ಸ್ವಿಮ್ಮಿಂಗ್ ಪರಿಣಿತರಿಂದ ಈ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಾಲೂಕಿನ ಗುರ್ಜಾಪುರ ಸೇತುವೆ ಮೇಲೆ ಆರ್ಟಿಸಿಪಿಎಸ್ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ.
ಸ್ಟ್ರಕ್ ಆಗಿರುವ ಗೇಟ್ ತೆಗೆಯಲು ಪರಿಣಿತರು ಜೆಸಿಬಿ ಸಹಾಯದೊಂದಿಗೆ ಹರಸಹಾಸ ಪಡುತ್ತಿದ್ದಾರೆ. ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟ ಪರಿಣಾಮ, ಕಾರ್ಯಾಚರಣೆ ಪ್ರವಾಹ, ಮೊಸಳೆಗಳ ಭೀತಿಯ ನಡುವೆ ನಡೆಯುತ್ತಿದೆ. 194 ಗೇಟುಗಳ ಪೈಕಿ ಈಗ ಕೇವಲ 98 ಗೇಟ್ಗಳು ಮಾತ್ರ ಓಪನ್ ಆಗಿವೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಅಧಿಕಾರಿಗಳ ಎಡವಟ್ಟಿನಿಂದ ಯಾದಗಿರಿ, ರಾಯಚೂರಿನ ರೈತರ ಜಮೀನುಗಳು ಜಲಾವೃತವಾಗಿವೆ.