ಕರ್ನಾಟಕ

karnataka

ETV Bharat / state

ನರೇಗಾ ಯೋಜನೆ ಜಾರಿಯಲ್ಲಿ ಬಳ್ಳಾರಿ ಪ್ರಥಮ, ರಾಯಚೂರಿಗೆ ಎರಡನೇ ಸ್ಥಾನ: ಸಚಿವ ಈಶ್ವರಪ್ಪ - ನರೇಗಾ ಯೋಜನೆಯಡಿ ಜನರಿಗೆ ಕೆಲಸ

ನರೇಗಾ ಯೋಜನೆಯಡಿ ಜನರಿಗೆ ಕೆಲಸ ನೀಡುವಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಸುಮಾರು ಲಕ್ಷಕ್ಕೂ ಹೆಚ್ಚು ಮಾನವ ದಿನಗಳನ್ನು ರೂಪಿಸುವ ಮೂಲಕ ರಾಯಚೂರು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Raichur comes second Narega project KS Eshwarappa
ನರೇಗಾ ಯೋಜನೆ ಜಾರಿಯಲ್ಲಿ ರಾಯಚೂರು ಎರಡನೇ ಸ್ಥಾನದಲ್ಲಿದೆ: ಕೆ.ಎಸ್.ಈಶ್ವರಪ್ಪ

By

Published : Jun 4, 2020, 4:51 PM IST

Updated : Jun 4, 2020, 5:30 PM IST

ರಾಯಚೂರು:ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನರೇಗಾ ಯೋಜನೆ ಜಾರಿಯಲ್ಲಿ ಬಳ್ಳಾರಿ ಪ್ರಥಮ, ರಾಯಚೂರಿಗೆ ಎರಡನೇ ಸ್ಥಾನ: ಸಚಿವ ಈಶ್ವರಪ್ಪ

ರಾಯಚೂರು ಹೊರವಲಯದ ಕೃಷಿ ವಿವಿ ಆವರಣದಲ್ಲಿನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್​ನಿಂದ ಆಯೋಜಿಸಿದ್ದ ಅಂತರ್ಜಲ ಚೇತನ ಯೋಜನೆಯ ಕಾಮಗಾರಿಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿಯಲ್ಲಿ ಜನರಿಗೆ ಕೆಲಸ ನೀಡುವುದರಲ್ಲಿ ಬಳ್ಳಾರಿ ಮೊದಲ ಸ್ಥಾನದಲ್ಲಿದೆ. ಸುಮಾರು ಲಕ್ಷಕ್ಕೂ ಹೆಚ್ಚು ಮಾನವ ದಿನಗಳನ್ನು ರೂಪಿಸುವ ಮೂಲಕ ರಾಯಚೂರು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನರೇಗಾ ಯೋಜನೆಯನ್ನ ದೇಶದಲ್ಲಿ ಛತ್ತೀಸ್​ಘಡ ಮೊದಲ ಸ್ಥಾನ ಪಡೆದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು. ನರೇಗಾ ಯೋಜನೆ ರಾಜ್ಯದ ಹಳೆಯ ಬಾಕಿಯಲ್ಲಿ ಪಾವತಿಯಾಗಿದ್ದು, ಹೊಸ ಬಾಕಿ ಯೋಜನೆಯಲ್ಲಿ ಯಾವುದೂ ಇಲ್ಲ. ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣವನ್ನ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನ ಹೆಚ್ಚಳ ಮಾಡುವ ಅಂತರ್ಜಲ ಚೇತನ ಯೋಜನೆ ಕಾಮಗಾರಿಗಳನ್ನು ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಯಡಿ ಬರುವ ಮೂರು ವರ್ಷಗಳಲ್ಲಿ ಅಂತರ್ಜಲ ಮಟ್ಟವನ್ನ ಹೆಚ್ಚಿಸಲಾಗುವುದು. ಇದಕ್ಕೆ ಪ್ರತಿಜ್ಞೆ ಮಾಡಿರುವುದಾಗಿ ಹೇಳಿದರು. ರಾಜ್ಯದಲ್ಲಿ 6021 ಗ್ರಾಮ ಪಂಚಾಯತ್​​ಗಳಲ್ಲಿ ಸೋಲಾರ್ ಲೈಟ್ ಆಳವಡಿಕೆ ಮಾಡಲಾಗುವುದು. ಇದಕ್ಕಾಗಿ ಸೋಲಾರ್ ಲೈಟ್ ಖರೀದಿ ಟೆಂಡರ್ ಮುಗಿದ್ದು, ಗುಣಮಟ್ಟದ ಸೋಲಾರ್ ಲೈಟ್ ಆಳವಡಿಕೆ ಕಾರ್ಯ ನಡೆಯಲಿದೆ ಎಂದರು.

Last Updated : Jun 4, 2020, 5:30 PM IST

ABOUT THE AUTHOR

...view details