ಕರ್ನಾಟಕ

karnataka

By

Published : Apr 22, 2022, 6:41 PM IST

ETV Bharat / state

ಆರ್​ಎಸ್​ಎಸ್​-ಎಸ್‌ಡಿಪಿಐ ಹೋಲಿಕೆ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನ: ಸಚಿವ ಜೋಶಿ

ಇವತ್ತಿಗೂ ಸಹ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಆರ್​ಎಸ್​ಎಸ್​ ಕೆಲಸ ಮಾಡುತ್ತಿದೆ. ಇವರ ಸರ್ಕಾರದಲ್ಲಿ ಸಂಘವನ್ನು ‌‍ಎರಡು ಬಾರಿ ಬ್ಯಾನ್ ಮಾಡಿದ್ರು ಎಂದು ಕೇಂದ್ರ ಸಚಿವ ‌ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಆರ್​ಎಸ್​ಎಸ್​ ಜಗತ್ತಿನ ದೊಡ್ಡ ಸಂಘಟನೆಯಾಗಿ ಕೆಲಸ ಮಾಡುತ್ತಿದೆ ಎಂದ ಪ್ರಹ್ಲಾದ್ ಜೋಶಿ
ಆರ್​ಎಸ್​ಎಸ್​ ಜಗತ್ತಿನ ದೊಡ್ಡ ಸಂಘಟನೆಯಾಗಿ ಕೆಲಸ ಮಾಡುತ್ತಿದೆ ಎಂದ ಪ್ರಹ್ಲಾದ್ ಜೋಶಿ

ರಾಯಚೂರು: ಆರ್​ಎಸ್ಎಸ್​ ಅನ್ನು ಎಸ್​ಡಿಪಿಐಗೆ ಹೋಲಿಕೆ ಮಾಡಿದ್ದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನಕ್ಕೆ ಒಂದು ಸಾಕ್ಷಿ. ನೆಹರು ಕಾಲದಿಂದ ವಲ್ಲಭಭಾಯಿ ಪಟೇಲ್ ಕಾಲದವರೆಗೆ ಆರ್​ಎಸ್​ಎಸ್​ ಪರೇಡ್​​ಗೆ ಅವಕಾಶ ‌ನೀಡಲಾಗಿತ್ತು.‌ ಇವತ್ತಿಗೂ ಸಹ ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಆರ್​ಎಸ್​ಎಸ್​ ಕೆಲಸ ಮಾಡುತ್ತಿದೆ. ಇವರ ಸರ್ಕಾರದಲ್ಲಿ ಆರ್​ಎಸ್​ಎಸ್ ‌‍ಎರಡು ಬಾರಿ ಬ್ಯಾನ್ ಮಾಡಿದ್ರು ಎಂದು ಕೇಂದ್ರ ಸಚಿವ ‌ಪ್ರಹ್ಲಾದ್ ಜೋಶಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು

ಸಿದ್ದರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಮೇಲಾಗಿ ವಿಪಕ್ಷ ನಾಯಕರು. ಅವರು ಧಮ್ ಗಿಮ್ ಅಂತ ಮಾತನಾಡುತ್ತಾರಲ್ಲ, ಅವರ ಯೋಗ್ಯತೆಗೆ, ವ್ಯಕ್ತಿತ್ವಕ್ಕೆ ಅದು ಒಳ್ಳೆಯದ್ದಲ್ಲ. ಹಿ ಶುಡ್ ನಾಟ್ ಟಾಕ್ ನಾನ್ ಸೆನ್ಸ್... ಐ ವಿಲ್ ಅಡ್ವೈಸ್ ಹಿಮ್​ ಎಂದು ಹೇಳಿದ ಅವರು, ಆರ್​ಎಸ್ಎಸ್​ ಅನ್ನು ಎಸ್​ಡಿಪಿಐಗೆ ಹೋಲಿಕೆ ಮಾಡಿದ್ದು ಖಂಡನೀಯ. ಇದು ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣಕ್ಕೆ ಹಿಡಿದಿರುವ ದಾರಿ ಅಷ್ಟೇ ಎಂದರು.

For All Latest Updates

TAGGED:

ABOUT THE AUTHOR

...view details