ಕರ್ನಾಟಕ

karnataka

ಲಾಕ್​ಡೌನ್​ ಘೋಷಿಸಿದ್ದರೂ ಕ್ಯಾರೇ ಎನ್ನದ ರಾಯಚೂರು ಜನತೆ

By

Published : May 10, 2021, 11:54 AM IST

ರಾಯಚೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ ಜನರು ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

Raichur
ರಾಯಚೂರಿನಲ್ಲಿ ಜನಸಂದಣಿ

ರಾಯಚೂರು:ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ‌‌ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ನಿಯಂತ್ರಣ ಮಾಡಲು ಸಂಬಂಧಿಸಿದ ಇಲಾಖೆ‌ ಕಸರತ್ತು ನಡೆಸುತ್ತಿದೆ.

ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಟಫ್ ರೂಲ್ಸ್ ಜಾರಿಗೊಳಿಸಿದೆ. ಆದರೆ ನಗರದ ತರಕಾರಿ, ಬಟ್ಟೆ ಬಜಾರ್​ನಲ್ಲಿ ಸಮಯ ಮುಗಿದರೂ ಜನ ಓಡಾಟ ಮಾಡುತ್ತಿದ್ದಾರೆ. ಇದನ್ನ ಕಂಡ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಕಳೆದ ದಿನ 702 ಪ್ರಕರಣಗಳು ಪತ್ತೆಯಾಗಿವೆ. ಪ್ರತೀ ದಿನ ಕೊರೊನಾ ಹೆಚ್ಚಳವಾಗುತ್ತಿದ್ದರೂ ಸಹ ಜನ ಕ್ಯಾರೇ ಎನ್ನುತ್ತಿಲ್ಲ.

ABOUT THE AUTHOR

...view details