ಕರ್ನಾಟಕ

karnataka

ETV Bharat / state

ರಾಯಚೂರು: ಸಿಡಿಲಿಗೆ ವ್ಯಕ್ತಿ ಸೇರಿ 20ಕ್ಕೂ ಹೆಚ್ಚು ಕುರಿಗಳು ಬಲಿ - ಕವಿತಾಳ ಪೊಲೀಸ್ ಠಾಣೆ

ರಾಯಚೂರಿನಲ್ಲಿ ಸಿಡಿಲು ಬಡಿದು ಕುರಿಗಾಹಿ ಸೇರಿದಂತೆ 20 ಕುರಿಗಳು ಬಲಿಯಾಗಿವೆ.

Over 20 sheep killed in raichuru
ಸಿಡಿಲಿಗೆ ವ್ಯಕ್ತಿ ಸೇರಿ 20ಕ್ಕೂ ಕುರಿಗಳು ಬಲಿ

By

Published : Apr 14, 2021, 9:15 PM IST

Updated : Apr 14, 2021, 9:55 PM IST

ರಾಯಚೂರು:ಮರದ ಕೆಳಗಡೆ ನಿಂತಾಗ ಸಿಡಿಲು ಬಡಿದು ಓರ್ವ ಕುರಿಗಾಹಿ ಹಾಗೂ 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸಿಡಿಲಿಗೆ ವ್ಯಕ್ತಿ ಸೇರಿ 20ಕ್ಕೂ ಕುರಿಗಳು ಬಲಿ

ಜಿಲ್ಲೆಯ ಸಿರವಾರ ತಾಲೂಕಿನ ಆನಂದಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇದಿನಾಪುರ ಗ್ರಾಮದ ಕುರಿಗಾಹಿ ಈರಪ್ಪ(32) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಈತನ ಜತೆಯಲ್ಲಿದ್ದ 20ಕ್ಕೂ ಅಧಿಕ ಕುರಿಗಳು ಬಲಿಯಾಗಿವೆ.

ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Apr 14, 2021, 9:55 PM IST

ABOUT THE AUTHOR

...view details