ರಾಯಚೂರು: ಕ್ರೂಸರ್ - ಪಿಕ್ ಅಪ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿರವಾರ ತಾಲೂಕಿನ ಜಾಲಾಪುರ ಕ್ಯಾಂಪ್ ಬಳಿ ಸಂಭವಿಸಿದೆ.
ಕ್ರೂಸರ್ - ಪಿಕ್ ಅಪ್ ವಾಹನಗಳ ನಡುವೆ ಡಿಕ್ಕಿ: ಓರ್ವ ಸಾವು - ರಾಯಚೂರಿನಲ್ಲಿ ಕ್ರೂಸರ್-ಪಿಕ್ಅಪ್ ವಾಹನಗಳ ನಡುವೆ ಡಿಕ್ಕಿ ಓರ್ವ ಸಾವು
ಸಿರವಾರ ತಾಲೂಕಿನ ಜಾಲಾಪುರ ಕ್ಯಾಂಪ್ ಬಳಿ ಕ್ರೂಸರ್ - ಪಿಕ್ ಅಪ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ.
ಕ್ರೂಸರ್-ಪಿಕ್ಅಪ್ ವಾಹನಗಳ ನಡುವೆ ರಸ್ತೆ ಅಪಘಾತ
ಕ್ರೂಸರ್ ವಾಹನ ಚಾಲಕ ನಾಗರಾಜ(29) ಸಾವನ್ನಪ್ಪಿದ್ದಾನೆ. ಮಹೇಶ, ಜಯಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಿಕ್ಅಪ್ ವಾಹನದಲ್ಲಿ ಚಾಲಕ ಒಬ್ಬನೇ ಇದ್ದು, ಕ್ರೂಸರ್ ವಾಹನದಲ್ಲಿ ಇಬ್ಬರು ಇದ್ದರು. ಘಟನೆಯಲ್ಲಿ ಕ್ರೂಸರ್ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.