ರಾಯಚೂರು : ನವೋದಯ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ನ ಚಿಕಿತ್ಸೆಗಾಗಿ 250 ಬೆಡ್ಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ನವೋದಯ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ ತಿಳಿಸಿದ್ದಾರೆ.
ಕೊರೊನಾ ಚಿಕಿತ್ಸೆಗಾಗಿ ನವೋದಯ ಆಸ್ಪತ್ರೆಯಲ್ಲಿ 250 ಬೆಡ್ಗಳ ಸಿದ್ಧತೆ.. - raichur navoday news
ನಗರದಲ್ಲಿ ಡಿ ಗ್ರೂಪ್ನ ನೂರಾರು ನೌಕರರಿಗೆ ವಾರಕ್ಕೆ ಆಗುವ ದಿನಸಿಯನ್ನ ವಿತರಣೆ ಮಾಡಿ ಮಾತನಾಡಿ ನವೋದಯ ಅಧ್ಯಕ್ಷ ಎಸ್. ಆರ್. ರೆಡ್ಡಿ ಕೊರೊನಾ ವೈರಸ್ನ ಚಿಕಿತ್ಸೆಗಾಗಿ 250 ಬೆಡ್ಗಳ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
![ಕೊರೊನಾ ಚಿಕಿತ್ಸೆಗಾಗಿ ನವೋದಯ ಆಸ್ಪತ್ರೆಯಲ್ಲಿ 250 ಬೆಡ್ಗಳ ಸಿದ್ಧತೆ..](https://etvbharatimages.akamaized.net/etvbharat/prod-images/768-512-6747817-848-6747817-1586587119517.jpg)
ನವೋದಯ ಆಸ್ಪತ್ರೆ
ನಗರದ ನವೋದಯ ಫೌಂಡೇಶೇಷನ್ ವತಿಯಿಂದ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಕೆಲಸ ಮಾಡುವ ಡಿ ಗ್ರೂಪ್ನ ನೂರಾರು ನೌಕರರಿಗೆ ವಾರಕ್ಕೆ ಆಗುವ ದಿನಸಿಯನ್ನ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19ಗಾಗಿ ಮೂರು ವಿಭಾಗಗಳನ್ನ ವಿಭಾಗ ಮಾಡಿ 250 ಬೆಡ್ಗಳನ್ನ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಐಸೋಲೋಷನ್ ವಾರ್ಡ್, ಐಸಿಯು ವಾರ್ಡ್, ಕ್ವಾರಂಟೈನ್ ವಾರ್ಡ್ಗಳನ್ನ ನಿರ್ಮಾಣ ಮಾಡಲಾಗಿದೆ. ಇದರ ಹೊರತಾಗಿ ಎಲ್ಲಾ ಕಾಯಿಲೆಗಳ ಚಿಕಿತ್ಸೆ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದ್ರು.