ಕರ್ನಾಟಕ

karnataka

ETV Bharat / state

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕನಿಗೆ ಗಾಯ

ಹಟ್ಟಿ ಚಿನ್ನದ ಗಣಿಯಲ್ಲಿ ಅವಘಡವೊಂಡು ಸಂಭವಿಸಿದೆ. ಕೆಲಸದ ವೇಳೆ ಮಣ್ಣು ಕುಸಿದುಬಿದ್ದ ಪರಿಣಾಮ ಕಾರ್ಮಿಕ ಗಾಯಗೊಂಡಿದ್ದಾನೆ.

By

Published : May 6, 2019, 7:41 PM IST

ಕಾರ್ಮಿಕನಿಗೆ ಗಾಯ

ರಾಯಚೂರು : ಚಿನ್ನದ ಗಣಿಯಲ್ಲಿ ಮಣ್ಣು ಅಗೆಯುವಾಗ ಮಣ್ಣು ಕುಸಿದು ಕಾರ್ಮಿಕನೋರ್ವ ಗಾಯಗೊಂಡಿದ್ದಾನೆ.


ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಮೆಹಬೂಬ್ ಸಾಬ್ ಗಾಯಗೊಂಡ ಕಾರ್ಮಿಕನೆಂದು ಎಂದು ತಿಳಿದುಬಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಣ್ಣು ಅಗೆಯುವ ಗುತ್ತಿಗೆ ಪಡೆದ ಟೆಕ್ನೋ ಮೈನ್ಸ್ ಕಂಪನಿಯಲ್ಲಿ ಮೆಹಬೂಬ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಎಂದಿನಂತೆ ಲೋಡರ್​ನಿಂದ ಮಣ್ಣು ಅಗೆಯುವಾಗ ಈ ದುರ್ಘಟನೆ ಸಂಭವಿಸಿದೆ.

ಕಾರ್ಮಿಕನಿಗೆ ಗಾಯ

ಗಾಯಾಳು ಮೆಹಬೂಬ್​ನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details