ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್ವೈ - ಶಾಸಕ ನಾಡಗೌಡ ಭೇಟಿ.. ಕುತೂಹಲ ಮೂಡಿಸಿದ ನಡೆ - ಶಾಸಕ ವೆಂಕಟರಾವ್ ನಾಡಗೌಡ ಬಿಎಸ್​ವೈ ಭೇಟಿ

ಮಸ್ಕಿ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರಕ್ಕೆಂದು ಬಂದಿದ್ದ ವೇಳೆ ಸಿಎಂ ಬಿ.ಎಸ್.​ ಯಡಿಯೂರಪ್ಪನವರನ್ನು ಜೆಡಿಎಸ್​ ಶಾಸಕ ವೆಂಕಟರಾವ್ ನಾಡಗೌಡ ಭೇಟಿಯಾಗಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

JDS MLA meets cm Yadiyurappa
ಸಿಎಂ ಭೇಟಿಯಾದ ಜೆಡಿಎಸ್ ಶಾಸಕ

By

Published : Mar 21, 2021, 10:56 AM IST

ರಾಯಚೂರು:ಮಸ್ಕಿ ಬೈ ಎಲೆಕ್ಷನ್ ಚುನಾವಣೆ ಪ್ರಚಾರಕ್ಕೆ ಬಂದ ಸಿಎಂ ಬಿ.ಎಸ್.​ ಯಡಿಯೂರಪ್ಪನವರನ್ನು ಜೆಡಿಎಸ್ ಶಾಸಕ ಭೇಟಿಯಾಗಿರುವುದು ಭಾರಿ‌ ಕೌತುಕ ಮೂಡಿಸಿದೆ.

ಸಿಎಂ ಭೇಟಿಯಾದ ಜೆಡಿಎಸ್ ಶಾಸಕ

ಜಿಲ್ಲೆಯ ಸಿಂಧನೂರು ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿರುವ ಸಿಎಂ, ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರನ್ನು ಭೇಟಿ ಮಾಡಿದ್ದಾರೆ. ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ನಿನ್ನೆ ಮಸ್ಕಿ ಪಟ್ಟಣದಲ್ಲಿ ಆಯೋಜಿಸಿದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸಿಂಧನೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸಿಎಂ ವಾಸ್ತವ್ಯ ಮಾಡಿದ್ದಾರೆ. ಇಂದು ಬೆಳಗ್ಗೆ ಜೆಡಿಎಸ್ ಮುಖಂಡ ವೆಂಕಟ್‌ರಾವ್ ನಾಡಗೌಡ ಅವರನ್ನು ಸಿಎಂ ಭೇಟಿ ಮಾಡಿ ಹಲವು ವಿಚಾರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಭೇಟಿಯಾದ ಜೆಡಿಎಸ್ ಶಾಸಕ

ಉಪಚುನಾವಣೆ ಪ್ರಚಾರಕ್ಕೆ ಬಂದ ವೇಳೆ ವೆಂಕಟರಾವ್ ನಾಡಗೌಡ ಭೇಟಿ ಕುತೂಹಲ ಮೂಡಿಸಿದೆ. ಈ ವೇಳೆ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇದ್ದರು ಎನ್ನಲಾಗುತ್ತಿದೆ.

ಸಿಎಂ ಭೇಟಿಯಾದ ಜೆಡಿಎಸ್ ಶಾಸಕ

ಇದನ್ನೂ ಓದಿ:ಹೋಟೆಲ್​ನಲ್ಲಿ ವೇಶ್ಯಾವಾಟಿಕೆ: 23 ಮಂದಿ ಬಂಧನ

ABOUT THE AUTHOR

...view details