ರಾಯಚೂರು: ತಾಲೂಕಿನ ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ವಿಷ ಹಾಕಿ ಮೀನುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ: ಇಬ್ಬರು ಆರೋಪಿಗಳ ಬಂಧನ - ರಾಯಚೂರು ಲೇಟಸ್ಟ್ ಕ್ರೈಂ ನ್ಯೂಸ್
ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ವಿಷ ಹಾಕಿ ಮೀನುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ: ಇಬ್ಬರು ಆರೋಪಿಗಳ ಬಂಧನ miscreants who poisoned the lake](https://etvbharatimages.akamaized.net/etvbharat/prod-images/768-512-9159577-751-9159577-1602581251647.jpg)
ಕೆರೆಗೆ ವಿಷ ಹಾಕಿ ಮೀನುಗಳ ಸಾವು..
ಜಂಗ್ಲಪ್ಪ, ಕೊಂಡಪ್ಪ ಬಂಧಿತ ಆರೋಪಿಗಳು. ಕಟ್ಲಟ್ಕೂರು ಗ್ರಾಮದ 300 ಹೆಚ್ಚು ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ಮೀನುಗಾರರು ಮೀನು ಸಾಕಾಣಿಕೆ ಮಾಡಿದ್ದರು. ಆದ್ರೆ ಕಿಡಿಗೇಡಿಗಳು ಕೆರೆಯಲ್ಲಿ ವಿಷ ಬೆರೆಸಿದ ಪರಿಣಾಮ ಅಪಾರ ಪ್ರಮಾಣದ ಮೀನುಗಳು ಮೃತಪಟ್ಟಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಜಳ್ಳಿ ಗಂಗಾಮತ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ನರಸಪ್ಪ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.