ರಾಯಚೂರು: ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಮಾತಪಳ್ಳಿ ಗ್ರಾಮದಲ್ಲಿ ಈ ಜರುಗಿದೆ.
ಯಲ್ಲಮ್ಮದೇವಿ ಜಾತ್ರೆಗೆ ಹೋದವ ಹೆಣವಾಗಿ ಪತ್ತೆ - ರಾಯಚೂರು ಅಪರಾಧ ಸುದ್ದಿ
ಮೂರು ದಿನದ ಹಿಂದೆ ಮಾತಪಳ್ಳಿ ಗ್ರಾಮದಲ್ಲಿನ ಶ್ರೀ ಯಲ್ಲಮ್ಮದೇವಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಈತ ಜಾತ್ರೆಗೆ ತೆರಳಿದ್ದ. ಆ ವೇಳೆ ಮದ್ಯಪಾನ ಮಾಡಿ ಬಾವಿಯೊಳಗೆ ಬಿದ್ದಿದ್ದಾನೆಂದು ಹೇಳಲಾಗುತ್ತಿದೆ.

ಯಲ್ಲಮ್ಮದೇವಿ ಜಾತ್ರೆಗೆ ಹೋದವ ಹೆಣವಾಗಿ ಪತ್ತೆ
ತಿಮ್ಮಾಪುರ ಗ್ರಾಮದ ನಿವಾಸಿ ರಮೇಶ್ ಮಾರ್ಕಂಡೇಯ(35) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೂರು ದಿನದ ಹಿಂದೆ ಮಾತಪಳ್ಳಿ ಗ್ರಾಮದಲ್ಲಿನ ಶ್ರೀ ಯಲ್ಲಮ್ಮ ದೇವಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ರಮೇಶ್ ಜಾತ್ರೆಗೆ ತೆರಳಿದ್ದ. ಆ ವೇಳೆ ಮದ್ಯಪಾನ ಮಾಡಿ ಬಾವಿಯೊಳಗೆ ಬಿದ್ದಿದ್ದಾನೆಂದು ಹೇಳಲಾಗುತ್ತಿದೆ.
ಬುಧವಾರ ಮೃತ ದೇಹ ಬಾಯಿಯಲ್ಲಿ ತೇಲುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನ ಹಸ್ತಾಂತರಿಸಲಾಗಿದೆ.