ಕರ್ನಾಟಕ

karnataka

By

Published : Jan 28, 2021, 1:41 PM IST

Updated : Jan 28, 2021, 3:06 PM IST

ETV Bharat / state

ಬೇರೆ - ಬೇರೆ ಮದುವೆ ಬಳಿಕ ಲವ್​ನಲ್ಲಿ ಬಿದ್ದರು.. ನಂತರ ನೇಣಿಗೆ ಶರಣಾದ ಪ್ರೇಮಿಗಳು!

ಬೇರೆ-ಬೇರೆ ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದ ಗೃಹಿಣಿ ಮತ್ತು ವ್ಯಕ್ತಿಯ ಮಧ್ಯೆ ಪ್ರೇಮಾಂಕುರ ಬೆಳೆದು ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಈಗ ಆ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

Lover committed suicide, Lover committed suicide in Raichur, Raichur crime news, ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು, ರಾಯಚೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು, ರಾಯಚೂರು ಅಪರಾಧ ಸುದ್ದಿ,
ಆಸ್ಪತ್ರೆ ಮುಂದೆ ಸೇರಿದ ಜನ

ರಾಯಚೂರು: ವಿವಾಹೇತರ ಸಂಬಂಧ ಹೊಂದಿದ್ದ ಇಬ್ಬರು ವಿವಾಹಿತ ಪ್ರೇಮಿಗಳ್ಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಂಗಯ್ಯ (29), ರಂಗಮ್ಮ(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಗಯ್ಯ ಹಾಗೂ ರಂಗಮ್ಮ ಇಬ್ಬರು ವಿವಾಹಿತರಾಗಿದ್ದು, ಇಬ್ಬರ ನಡುವೆ ವಿವಾಹೇತರ ಸಂಬಂಧ ಸಾಗುತ್ತಿತ್ತು. ಈ ನಡುವೆ ಇಬ್ಬರ ಮಧ್ಯೆ ಯಾವುದೋ ವಿಷಯಕ್ಕೆ ವೈಮನಸ್ಸಾಗಿದೆ. ವೈಮನಸ್ಸಿನಿಂದಾಗಿ ಇಬ್ಬರು ಹೇಮನೂರು ಗ್ರಾಮದಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನ‌ ದೇವದುರ್ಗ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಘಟನೆ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jan 28, 2021, 3:06 PM IST

ABOUT THE AUTHOR

...view details