ಕರ್ನಾಟಕ

karnataka

ಮುಪ್ಪಿನ ವೇಳೆ ಒಪ್ಪೊತ್ತಿನ ಊಟಕ್ಕೂ ಪರದಾಟ; ಮಸ್ಕಿಯಲ್ಲಿ ದಿವ್ಯಾಂಗ ವ್ಯಕ್ತಿಯ ಕುಟುಂಬದ ಸಂಕಟ

ಕೋವಿಡ್​​ ಕರಿನೆರಳಿಗೆ ದಿವ್ಯಾಂಗ ವ್ಯಕ್ತಿಯ ಕುಟುಂಬವೊಂದು ಅಕ್ಷರಶಃ ನಲುಗಿದೆ. ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಸಂಸಾರವೊಂದು ಲಾಕ್​ಡೌನ್​ ಬಿಸಿಗೆ ಬೆಂದು ಹೋಗಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

By

Published : Apr 13, 2020, 11:30 AM IST

Published : Apr 13, 2020, 11:30 AM IST

lock-down-effect-blind-person-family-in-risk-at-raichuru-maski
ಅಂಧನ ಕುಟುಂಬಕ್ಕೆ ತುತ್ತು ಕೂಳು ಸಿಗದಂತೆ ಮಾಡಿದ ಕೊರೊನಾ ಲಾಕ್​ಡೌನ್​​​

ರಾಯಚೂರು:ಕೊರೊನಾ ವೈರಸ್​ ಜನರನ್ನು ಬಲಿ ಪಡೆಯುತ್ತಿರುವುದಲ್ಲದೆ ಹಲವಾರು ಜನರ ಬದುಕನ್ನೂ ಅತಂತ್ರಗೊಳಿಸಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಸ್ಕಿ ಪಟ್ಟಣದ ವಿಶಿಷ್ಟ ಚೇತನ ವ್ಯಕ್ತಿಯ ಕುಟುಂಬ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದೆ.

ದಿವ್ಯಾಂಗನ ಕುಟುಂಬಕ್ಕೆ ಕೂಳು ಸಿಗದಂತೆ ಮಾಡಿದ ಕೊರೊನಾ ​​​

ಕಳೆದ ನಾಲ್ಕು ವರ್ಷದ ಹಿಂದೆ ಕಣ್ಣು ಕಳೆದುಕೊಂಡಿರುವ ಮಸ್ಕಿಯ ನಿವಾಸಿ ಶಂಕ್ರಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ವಾಸಯೋಗ್ಯ ಮನೆಯಿಲ್ಲದಿರುವ ಈ ಜೀವಕ್ಕೆ ಮುಪ್ಪಿನಲ್ಲಿಯೂ ಕುಳಿತು ತಿನ್ನುವ ಭಾಗ್ಯವಿಲ್ಲ. ಶಂಕ್ರಪ್ಪನ ಜೊತೆಗೆ ವೃದ್ಧ ತಾಯಿಯೂ ಕೂಲಿ ನಾಲಿ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಆದರೀಗ ಲಾಕ್‌ಡೌನ್ ಜಾರಿಯಲ್ಲಿದೆ. ಜೀವನದ ಸಂಧ್ಯಾಕಾಲದಲ್ಲೂ ದುಡಿಯುತ್ತಿರುವ ಕೈಗಳಿಗೆ ಕೆಲಸವಿಲ್ಲ. ಪರಿಣಾಮ ಆದಾಯವಿಲ್ಲದೆ ಒಪ್ಪೊತ್ತಿನ ಊಟಕ್ಕೆ ಪರದಾಡುವಂತಾಗಿದೆ.

ಈ ಸುದ್ದಿ ತಿಳಿದ ಪಿಎಸ್‌ಐ ಸಣ್ಣವೀರೇಶ ಮನೆ ದುರಸ್ಥಿಗೊಳಿಸವ ಭರವಸೆ ನೀಡಿದ್ದಾರೆ. ಇವರ ಕುಟುಂಬವನ್ನು ಸರ್ಕಾರ ಕೈಹಿಡಿಯುವುದೇ? ನೋಡೋಣ.

ABOUT THE AUTHOR

...view details