ಕರ್ನಾಟಕ

karnataka

ETV Bharat / state

ಸರ್ಕಾರದ ಹಣ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಪ್ರಕರಣ:  ಆರೋಪಿಗಳಿಗೆ ಜೈಲು ಶಿಕ್ಷೆ - ಲಿಂಗಸಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್​ಸಿ ನ್ಯಾಯಾಲಯ

ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಳ್ಳಲಾಗಿದ್ದು, ಲಿಂಗಸುಗೂರು ನ್ಯಾಯಾಲಯದಿಂದ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.

ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ
ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ

By

Published : Dec 11, 2019, 2:20 PM IST

Updated : Dec 11, 2019, 2:46 PM IST

ರಾಯಚೂರು: ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಳ್ಳಲಾಗಿದೆ. ಈ ಆರೋಪದ ಮೇರೆಗೆ ದಾವಣಗೆರೆಯ ಇಬ್ಬರು ಪ್ರಥಮ ದರ್ಜೆ ಗುತ್ತಿಗೆದಾರರನ್ನು, ಲಿಂಗಸುಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್​ಸಿ ನ್ಯಾಯಾಲಯ ದಂಡ ವಿಧಿಸಿ, ಮೂರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಲಾಗಿದೆ.

ನಕಲಿ‌ ಬಿಲ್ಲುಗಳನ್ನು ಸೃಷ್ಟಿಸಿ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ ಗುತ್ತಿಗೆದಾರ ಬುಲ್ಲನಗೌಡ ₹ 8,40,180 ಹಾಗೂ ಹಗರಿಬೊಮ್ಮನಳ್ಳಿ ತಾಲೂಕಿನ ಕಡ್ಲಬಾಳ ಗ್ರಾಮದ ಹೆಚ್.ಕೆ. ಶ್ರೀನಿವಾಸ ಪೂಜಾರ ₹ 8,41,141 ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಅಂದಿನ ಸಿಪಿಐ ಶಿವರಾಜ ಹೊಸಮನಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಬ್ಬರಿಗೆ ಅನುಕ್ರಮವಾಗಿ ₹ 50 ಸಾವಿರ ಹಾಗೂ ₹ 45 ಸಾವಿರ ದಂಡ ವಿಧಿಸಿ, ಈ‌ ಮೊತ್ತದಲ್ಲಿ ಇಬ್ಬರೂ ತಲಾ ರೂ.1,50,000 ಪರಿಹಾರದ ರೂಪದಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ನೀಡಲು ಕೋರ್ಟ್ ಆದೇಶಿಸಿದೆ.

ನಕಲಿ ದಾಖಲೆ ಸೃಷ್ಟಿಸಿ 18 ತಿಂಗಳ ಕೆಲಸ ಮಾಡಿದ ಭೂಪರು

ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಪೌರಾಡಳಿತ ನಿರ್ದೇಶನಾಲಯದ ನಕಲಿ ವರ್ಗಾವಣೆ ಆದೇಶ ಸೃಷ್ಟಿಸಿ, ಹಟ್ಟಿಯ ಚಿನ್ನದ ಗಣಿ ಕಂಪನಿಯಲ್ಲಿ 18 ತಿಂಗಳ ಕಾಲ ಇಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ.

ಲಿಂಗಸಗೂರಿನಲ್ಲಿ ಆರೋಪಿಗಳಿಗೆ ದಂಡ

ಫಯಾಜುದ್ದೀನ್ ಮತ್ತು ನಾಸಿರ್ ಅಲಿ ಸುಳ್ಳು ದಾಖಲೆ ಸೃಷ್ಟಿಸಿದ್ದು, ವೇತನ ಸಹ ಪಡೆದಿದ್ದಾರೆ. ಆ ಮೂಲಕ ಕಂಪನಿಗೆ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪಿಎಸ್ಐ ವರದರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Last Updated : Dec 11, 2019, 2:46 PM IST

ABOUT THE AUTHOR

...view details