ಕರ್ನಾಟಕ

karnataka

By

Published : Apr 20, 2019, 9:16 PM IST

Updated : Apr 20, 2019, 9:22 PM IST

ETV Bharat / state

ವಿದ್ಯಾರ್ಥಿನಿ ಸಾವು ಪ್ರಕರಣ: ವೈಜ್ಞಾನಿಕ ತನಿಖೆ ನಡೆಯುತ್ತಿದೆ, ಊಹಾಪೋಹ ಬೇಡ - ಐಜಿಪಿ ನಂಜುಂಡಿ ಸ್ವಾಮಿ

ಸಾಮಾಜಿಕ ಜಾಲತಾಣಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವತೆಗಿಂತ ಊಹಾಪೋಹಗಳೇ ಹೆಚ್ಚಾಗಿ ಹರಿದಾಡುತ್ತಿವೆ. ಇಂಥ ವಿಚಾರಗಳ ಮೇಲೆ ನಿಗಾ ಇಡಲಾಗುವುದು ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌

ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಸ್ಪಷ್ಟನೆ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣದ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಸ್ತವತೆಗಿಂತ ಊಹಾಪೋಹಗಳೇ ಹೆಚ್ಚು ಹರಿದಾಡುತ್ತಿವೆ ಎಂದು ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಹೇಳಿದ್ದಾರೆ.‌

ರಾಯಚೂರು ಎಸ್ಪಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ಬಳ್ಳಾರಿ ವಲಯ ಐಜಿಪಿ ನಂಜುಂಡಿ ಸ್ವಾಮಿ ಸ್ಪಷ್ಟನೆ

ಮೃತ ವಿದ್ಯಾರ್ಥಿನಿ ಬೆಂಗಳೂರು ಮೂಲದವರು, ಬೇರೆ ರಾಜ್ಯದವರು, ಬೇರೆ ಕಮ್ಯೂನಿಟಿಯವರು ಹೀಗೆ ಅನೇಕ ರೀತಿಯ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ರೀತಿ ಮಾಹಿತಿ ಹರಿಬಿಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಕರಣ ಕುರಿತು ಜಿಲ್ಲಾ ಪೊಲೀಸರು ಸೂಕ್ತವಾಗಿ, ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾರೇ ಇರಲಿ ಖಂಡಿತ ಶಿಕ್ಷೆ ವಿಧಿಸಲಾಗುವುದು ಎಂದು ಐಜಿಪಿ ನಂಜುಂಡ ಸ್ವಾಮಿ ಭರವಸೆ ನೀಡಿದರು.

Last Updated : Apr 20, 2019, 9:22 PM IST

For All Latest Updates

TAGGED:

ABOUT THE AUTHOR

...view details