ಕರ್ನಾಟಕ

karnataka

By

Published : Jul 23, 2019, 6:03 PM IST

ETV Bharat / state

ಅಕ್ರಮ ಸೇಂದಿ ಮಾರಾಟ ಅಡ್ಡ ಮೇಲೆ ದಾಳಿ : ಇಬ್ಬರ ಬಂಧನ

ರಾಯಚೂರು ನಗರದ ಮೈಲಾರಲಿಂಗ ಬಡಾವಣೆಯ ಮನೆಯೊಂದರಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಸೇಂದಿ ಮಾರಾಟದ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

ಅಕ್ರಮವಾಗಿ ನಗರದಲ್ಲಿ ತಯಾರಿಸುತ್ತ ಸೇಂದಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು

ರಾಯಚೂರು: ಅಕ್ರಮ ಸೇಂದಿ ತಯಾರಿಸುತ್ತಿದ್ದ ಅಡ್ಡ ಮೇಲೆ ರಾಯಚೂರು ಅಬಕಾರಿ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಸೇಂದಿ ಹಾಗೂ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ನಗರದಲ್ಲಿ ತಯಾರಿಸುತ್ತ ಸೇಂದಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು

ನಗರದ ಮೈಲಾರಲಿಂಗ ಬಡವಣೆಯ ಮನೆಯೊಂದರಲ್ಲಿ ಅಕ್ರಮವಾಗಿ ಸೇಂದಿ ತಯಾರಿಸುತ್ತಿದ್ದ ಅಡ್ಡ ಮೇಲೆ ದಾಳಿ ನಡೆಸಿ 1150 ಲೀಟರ್ ಸೇಂದ್ರಿ, 15 ಕೆ.ಜಿ. ಕ್ಲೋರೋ ಹೈಡ್ರೇಡ್, 4 ಕೆ.ಜಿ. ಈಸ್ಟ್, 4 ಕೆ.ಜಿ. ಸಕ್ಕರೆ ಹಾಗೂ 5 ಕೆ.ಜಿ. ಸಿಟ್ರಿಕ್ ಆಸಿಡ್ ವಶಕ್ಕೆ ಪಡೆದಿದ್ದಾರೆ. ಸೇಂದಿ ತಯಾರಿಸುತ್ತಿದ್ದ ಆರೋಪಿಗಳಾದ ಆಂಜನೇಯ ಮತ್ತು ತಿಮ್ಮಪ್ಪ ಇಬ್ಬರನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಸೇಂದಿ ತಯಾರಿಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳ ಜತೆ ಸಿಬ್ಬಂದಿಗಳು ದಾಳಿ ನಡೆಸಲಾಯಿತು. ಸೇಂದಿಗೆ ಬಳಸುತ್ತಿದ್ದ ಸಾಮಾಗ್ರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಾಗಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details