ಕರ್ನಾಟಕ

karnataka

ETV Bharat / state

ಸಿಎಂ ಸ್ಥಾನಕ್ಕೆ ನಾನೂ ಅರ್ಹ ಎಂದಾಕ್ಷಣ ನಾಳೆಯೇ ಸಿಎಂ ಬದಲಾಗಲ್ಲ: ವೆಂಕಟರಾವ್​​ ನಾಡಗೌಡ

ಸಿಎಂ ಸ್ಥಾನಕ್ಕೆ ನಾನೂ ಅರ್ಹ ಎಂದಾಕ್ಷಣ ನಾಳೆಯೇ ಸಿಎಂ ಬದಲಾಗಲ್ಲ. ಯಾವುದೇ ಆತಂಕ ಬೇಡ ಎಂದು ಸಚಿವ ವೆಂಕಟರಾವ್​ ನಾಡಗೌಡ ಹೇಳಿದ್ದಾರೆ.

By

Published : May 16, 2019, 8:18 PM IST

ನಾಳೆಯೇ ಸಿಎಂ ಬದಲಾಗಲ್ಲ

ರಾಯಚೂರು: ರಾಜ್ಯದಲ್ಲಿ ಮುಖ್ಯಮಂತ್ರಿ ‌ಸ್ಥಾನ ಖಾಲಿ ಇಲ್ಲ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ವೆಂಕಟರಾವ್ ನಾಡಗೌಡ, ಸಚಿವ

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯುತ್ತಿರುವಾಗ ಮುಖ್ಯಮಂತ್ರಿಯವರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ. ರೇವಣ್ಣ, ಡಿಕೆಶಿಯವರು ಸಿಎಂ ಆಗಲು ಆರ್ಹರಿದ್ದಾರೆ. ಆದರೆ, ಅವರು ಹೇಳಿದ ಮಾತ್ರಕ್ಕೆ ನಾಳೆಯೇ ಸಿಎಂ ಬದಲಾಗಲ್ಲ ಎಂದಿದ್ದಾರೆ.

ಇನ್ನು ಲೋಕಸಭೆ ಚುನಾವಣೆ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಮೇ 23ರ ಬಳಿಕ ಸರ್ಕಾರ ಪತನವಾಗುತ್ತದೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದ್ರೆ, ಈ ಮೊದಲೇ ಸಾಕಷ್ಟು ಬಾರಿ ಹೇಳಿದ್ದಾರೆ. ಇಂತಹ ಹಲವು ಗಡುವುಗಳನ್ನ ನಾವು ದಾಟಿದ್ದೇವೆ. ಯಾವುದೇ ಆತಂಕವಿಲ್ಲದೆ ಮೈತ್ರಿ ಸರ್ಕಾರ 5 ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details