ಕರ್ನಾಟಕ

karnataka

By

Published : Jun 27, 2021, 8:36 AM IST

Updated : Jun 27, 2021, 9:39 AM IST

ETV Bharat / state

ಮುಂಗಾರು ಮಳೆಗೆ ಮಸ್ಕಿ ಜಲಾವೃತ.. ವರುಣನ ಆರ್ಭಟಕ್ಕೆ ನಲುಗಿದ ಜನ

ರಾಯಚೂರು ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದಾನೆ. ನಿನ್ನೆ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ವಿವಿಧ ಭಾಗಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವುದರಿಂದ ಜನರು ಭಾರಿ ಸಂಕಷ್ಟ ಅನುಭವಿಸಿದರು. ಮೋಡ ಕವಿದ ವಾತಾವರಣವಿದ್ದು, ಮತ್ತೆ ಮಳೆ ಸುರಿಯುವ ಸಾಧ್ಯತೆಯಿದೆ.

heavy-rainfall-lashes-raichur district
ರಾಯಚೂರಲ್ಲಿ ವರುಣನ ಆರ್ಭಟ.. ಭಾರಿ ಮಳೆಗೆ ನಲುಗಿದ ಜನ

ರಾಯಚೂರು:ಜಿಲ್ಲೆಯಲ್ಲಿ ಶನಿವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ. ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಸ್ಕಿಯ ಗಾಂಧಿ ನಗರದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುವಂತಾಯಿತು.

ಜಲಾವೃತವಾದ ಪ್ರದೇಶ

ರಸ್ತೆಗಳೆಲ್ಲ ನದಿಗಳಂತಾಗಿದ್ದು, ಮನೆಗಳಿಗೆ ನುಗ್ಗಿ ನೀರನ್ನು ಹೊರಹಾಕಲು ಜನರು ಹರಸಾಹಸಪಟ್ಟರು. ಮಸ್ಕಿಯ ವಿವಿಧ ಬಡವಣೆಗಳಲ್ಲಿ ಮಳೆ‌ ನೀರು ನುಗ್ಗಿ ಜನ ಇಡೀ ಪಟ್ಟಣ ಜಲಾವೃತವಾದಂತೆ ಭಾಸವಾಗುತ್ತಿದೆ. ಇಡೀ ರಾತ್ರಿ ಮಲಗಲು ಜಾಗವಿಲ್ಲದೆ, ಜನರು ಜಾಗರಣೆ ಮಾಡುವಂತಾಯಿತು. ಮನೆ ಹೊರಗಡೆ ನಿಲ್ಲಿಸಿದ್ದ ವಾಹನಗಳು ನೀರಲ್ಲಿ ಮುಳುಗಿದ್ದ ದೃಶ್ಯಗಳು ಕಂಡುಬಂದಿವೆ.

ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ನಾನಾ ಭಾಗಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಭಾರಿ ಸಂಕಷ್ಟ ಅನುಭವಿಸಿದರು. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮತ್ತೆ ಮಳೆ ಸುರಿಯುವ ಸಾಧ್ಯತೆಯಿದೆ.

ರಾಯಚೂರು ಜಿಲ್ಲೆಯಲ್ಲಿ ಮಳೆ ಅಬ್ಬರ

ಈ ಮುಂಗಾರು ಮಳೆಯಿಂದ ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಪಟ್ಟಣಗಳಲ್ಲಿನ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇದನ್ನೂ ಓದಿ:ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ.. ಸ್ಥಳಕ್ಕೆ ದೌಡಾಯಿಸಿದ ಬಾಂಬ್​ ಸ್ಕ್ವಾಡ್​

Last Updated : Jun 27, 2021, 9:39 AM IST

ABOUT THE AUTHOR

...view details