ETV Bharat Karnataka

ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: ತಾಂಡಾಗೆ ಮರಳಿದ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ - ಈಟಿವಿ ಭಾರತ ಸುದ್ದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ

ಈಟಿವಿ ಭಾರತ ಸುದ್ದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗೋನವಾಟ್ಲ ತಾಂಡಾಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು.

Health officials response to etv bharat report
ತಾಂಡಾ ಜನತೆ ಆರೋಗ್ಯ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ
author img

By

Published : Mar 25, 2020, 11:45 AM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಗೋನವಾಟ್ಲ ತಾಂಡಾಕ್ಕೆ ಗುಳೆ ಹೋದವರು ಮರಳಿ ಬಂದಿದ್ದು, ಅನಾರೋಗ್ಯದಿಂದ ಬಳಲುತಿದ್ದರೂ, ಆರೋಗ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ತಾಂಡಾ ಜನತೆ ಸಾಮೂಹಿಕವಾಗಿ ಆರೋಪಿಸಿದ್ದರು.

ಈಟಿವಿ ಭಾರತ ತಾಂಡಾ ‘ಜನತೆ ಆರೋಗ್ಯ ರಕ್ಷಣೆಗೆ ಮುಂದಾಗದ ಆಡಳಿತ ವ್ಯವಸ್ಥೆ’ಎಂದು ಸುದ್ದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಆಡಳಿತ ಅಧಿಕಾರಿಗಳು, ಮಂಗಳವಾರ ಗೋನವಾಟ್ಲ ತಾಂಡಾಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ನಗರಗಳಿಂದ ಮರಳಿ ಬಂದವರು ಸೇರಿದಂತೆ ೧೫೦ ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಯಿತು.

ತಾಂಡಾ ಜನತೆ ಆರೋಗ್ಯ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ

ಈ ಪೈಕಿ ಗೋವಾ, ಮಹಾರಾಷ್ಟ್ರದಿಂದ ಬಂದ ಮೂವರಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಲಿಂಗಸುಗೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಡಾ.ಪಿ.ಬಿ.ಹಿರೇಮಠ ಮತ್ತು ಡಾ.ಆಯಿಷಾ ಬಿರಾದರ ನೇತೃತ್ವದ ತಂಡ ಆರೋಗ್ಯ ತಪಾಸಣೆ ನಡೆಸಿದರು.

ABOUT THE AUTHOR

...view details