ಕರ್ನಾಟಕ

karnataka

ETV Bharat / state

ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು.. ಮನೆಯಲ್ಲಿ ಮಡುಗಟ್ಟಿದ ನೀರವ ಮೌನ.. - ರಾಯಚೂರು ಸುದ್ದಿ

ಸದ್ಯ ಮೃತ ಶವಗಳನ್ನ ರಾಯಚೂರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಮೃತರ ಮನೆಯಲ್ಲಿ ನೀರವ ಮೌನ ಆವರಿಸಿದೆ.

four-people-died-in-andra-pradesh-river
ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು

By

Published : Jan 3, 2020, 12:06 PM IST

ರಾಯಚೂರು: ನದಿಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕಿಯರು ಸೇರಿ ಓರ್ವ ವ್ಯಕ್ತಿ ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಸಿದ್ದಪಟ್ಟಣಂನಲ್ಲಿ ನಡೆದಿದೆ.

ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಬಡಾವಣೆಯ ಮದಿಹಾ(12), ಫರಿಯಾ(10), ಲೋಹಾ(10) ಹಾಗೂ ಅನ್ವರ್ (35) ಮೃತ ದುರ್ದೈವಿಗಳಾಗಿದ್ದಾರೆ.

ಸಂಬಂಧಿಕರ ಮನೆಗೆ ತೆರಳಿದವರು ನೀರು ಪಾಲು..

ಇವರು ಕಡಪ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದಾಗ, ಸಿದ್ದಪಟ್ಟಣಂ ಬಳಿ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈಜುವ ವೇಳೆ ಮೂವರು ಬಾಲಕಿಯರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅನ್ವರ್ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಮೂವರು ಬಾಲಕಿಯರ ಜೊತೆಗೆ ರಕ್ಷಣೆಗೆ ಬಂದಿದ್ದ ವ್ಯಕ್ತಿ ಕೂಡ ನೀರು ಪಾಲಾಗಿದ್ದಾರೆ.

ಸದ್ಯ ಮೃತ ಶವಗಳನ್ನ ರಾಯಚೂರಿಗೆ ತೆಗೆದುಕೊಂಡು ಬರಲಾಗುತ್ತಿದೆ. ಮೃತರ ಮನೆಯಲ್ಲಿ ನೀರವ ಮೌನ ಆವರಿಸಿದೆ.

ABOUT THE AUTHOR

...view details