ಕರ್ನಾಟಕ

karnataka

ಜಮೀನು ಬಿಟ್ಟು ಬರಲು ನಡುಗಡ್ಡೆ ಜನರ ಹಿಂದೇಟು: ಮನವೊಲಿಸಿ ಕರೆತಂದ ಎನ್‌ಡಿಆರ್‌ಎಫ್

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗೋಡಿ ಗ್ರಾಮದ ಮ್ಯಾದರಗಡ್ಡಿಯ ನಡುಗಡ್ಡೆ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಜನರನ್ನು ಎನ್‌ಡಿಆರ್‌ಎಫ್ ತಂಡವು ರಕ್ಷಿಸಿದೆ.

By

Published : Aug 6, 2019, 6:11 PM IST

Published : Aug 6, 2019, 6:11 PM IST

Updated : Aug 6, 2019, 7:06 PM IST

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ

ರಾಯಚೂರು:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದ ನಡುಗಡ್ಡೆ ಪ್ರದೇಶದ ಕೆಲ ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, ಎನ್‌ಡಿಆರ್‌ಎಫ್ ತಂಡ ಅವರನ್ನು ರಕ್ಷಿಸಿದೆ.

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯ

ಕಾರ್ಯಾಚರಣೆಗೆಂದು ತಂಡ ತೆರಳಿದ್ದರೂ ಅಲ್ಲಿನ ಜನರು ತಮ್ಮ ಜಮೀನು, ಜಾನುವಾರುಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದ್ದರು. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳ ಮೂಲಕ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳೀಯ ತಾಲೂಕು ಆಡಳಿತವು ನಮಗೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತರು, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶ್ ಡಂಬಳ ಭಾಗಿಯಾಗಿದ್ದರು.

Last Updated : Aug 6, 2019, 7:06 PM IST

ABOUT THE AUTHOR

...view details