ಕರ್ನಾಟಕ

karnataka

ETV Bharat / state

ದನದ ಕೊಟ್ಟಿಗೆಗೆ ಬೆಂಕಿ: ಸಜೀವವಾಗಿ ಬೆಂಕಿಗೆ ಆಹುತಿಯಾದ ಜಾನುವಾರುಗಳು - ರಾಯಚೂರು

ಸೊಳ್ಳೆ ಕಾಟ ಹೆಚ್ಚಿದ್ದರಿಂದ ಕೊಟ್ಟಿಗೆ ಪಕ್ಕ ಚಿಕ್ಕದಾಗಿ ಬೆಂಕಿ ಹಾಕಲಾಗಿತ್ತು. ಆದರೆ, ಈ ಬೆಂಕಿ ಕೊಟ್ಟಿಗೆಗೆ ಹೊತ್ತಿಕೊಂಡು ಭಾರೀ ಅನಾಹುತ ಉಂಟಾಗಿದೆ.

Fire on cattle, died in raichur
ಸಜೀವವಾಗಿ ಬೆಂಕಿಗೆ ಆಹುತಿಯಾದ ಜಾನುವಾರುಗಳು

By

Published : Jan 15, 2021, 4:06 AM IST

ರಾಯಚೂರು: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, ಕೊಟ್ಟಿಗೆಯಲ್ಲಿದ್ದ ಎರಡು ಜಾನುವಾರುಗಳು ಸಜೀವವಾಗಿ ದಹನವಾಗಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಕರಿಬಸವನಗೌಡ ಎಂಬುವರಿಗೆ ಸೇರಿದ ಒಂದು ಎಮ್ಮೆ, ಒಂದು ಆಕಳು ಮೃತಪಟ್ಟಿವೆ. ಸೊಳ್ಳೆ ಕಾಟ ಹೆಚ್ಚಿದ್ದರಿಂದ ಕೊಟ್ಟಿಗೆ ಪಕ್ಕ ಚಿಕ್ಕದಾಗಿ ಬೆಂಕಿ ಹಾಕಲಾಗಿತ್ತು. ಆದರೆ ಈ ಬೆಂಕಿ ಕೊಟ್ಟಿಗೆಗೆ ಹೊತ್ತಿಕೊಂಡು ಭಾರೀ ಅನಾಹುತ ಉಂಟಾಗಿದೆ.

ಈ ಅವಘಡದಿಂದ ಎರಡು ಜಾನುವಾರು ಜೀವಂತ ಸುಟ್ಟು ಕರಕಲಾಗಿವೆ. ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details