ರಾಯಚೂರು: ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ನೆರೆ ಪರಿಹಾರ ಶೀಘ್ರದಲ್ಲಿ ಬರಲಿದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಹೇಳಿದ್ದಾರೆ.
ನೆರೆ ಪರಿಹಾರ ಬಂದೇ ಬರುತ್ತೆ: ಉಮೇಶ್ ಜಾಧವ್ ವಿಶ್ವಾಸ
ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಬಾರದ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಉಮೇಶ್ ಜಾಧವ್, ಖಂಡಿತವಾಗಿಯೂ ಕೇಂದ್ರ ಸರ್ಕಾರದಿಂದ ಪರಿಹಾರ ಬರುತ್ತೆ. ಸ್ವಲ್ಪ ವಿಳಂಬವಾಗಿದೆ ಆದರೆ ಪರಿಹಾರ ಬರುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಉಮೇಶ್ ಜಾಧವ್
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ತಿರಸ್ಕರಿಸಿಲ್ಲ. ನೆರೆ ಪರಿಹಾರದ ಬಗ್ಗೆ ಹಣಕಾಸು ಸಚಿವರು ವಿಚಾರಿಸುತ್ತಿದ್ದಾರೆ. ಪರಿಹಾರ ಬಂದೇ ಬರಲಿದ್ದು, ಸ್ವಲ್ಪ ವಿಳಂಬವಾಗಿದೆ. ಸ್ವ-ಪಕ್ಷದವರಿಂದಲೇ ಕೇಂದ್ರ ಸರಕಾರ ನಡೆಗೆ ವಿರೋಧಿಸಿದ್ದಾರೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ ಪಕ್ಷವಾಗಿದೆ. ಆದ್ದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದಷ್ಟು ಬೇಗ ಕೇಂದ್ರದಿಂದ ನೆರೆ ಪರಿಹಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.