ರಾಯಚೂರು :ನಗರದ ಬಸವೇಶ್ವರ ವೃತ್ತದ ಬಳಿಯ ರೈಲ್ವೆ ಸೇತುವೆ ಕೆಳಗೆ ವ್ಯಕ್ತಿಯೋರ್ವನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ರಾಯಚೂರು : ರೈಲ್ವೆ ಸೇತುವೆ ಕೆಳಗೆ ಶವ ಪತ್ತೆ - ರಾಯಚೂರು ರೈಲ್ವೆ ಹಳೆಯಲ್ಲಿ ಶವ ಪತ್ತೆ
ರಾಯಚೂರಿನಲ್ಲಿ ರೈಲ್ವೆ ಸೇತುವೆ ಕೆಳಗೆ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾದ ಸ್ಥಳ
ಮೃತ ವ್ಯಕ್ತಿಯನ್ನು ನಗರದ ಮಡ್ಡಿಪೇಟೆ ನಿವಾಸಿ ರಾಘವೇಂದ್ರ (31) ಎಂದು ಗುರುತಿಸಲಾಗಿದೆ. ಸಾವಿನ ಕುರಿತು ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹ ವೀಕ್ಷಿಸಲು ಸೇತುವೆ ಮೇಲೆ ಜನ ಸೇರಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.