ಕೊಪ್ಪಳ: ದುಷ್ಕರ್ಮಿಗಳು ಬಾಲಕನ ಕೈ ಕಾಲು ಕಟ್ಟಿ ತುಂಗಭದ್ರಾ ಎಡದಂಡೆ ನಾಲೆಗೆ ಎಸೆದಿರುವ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಬಾಲಕನ ಶವ ಪತ್ತೆ:ಕೊಲೆ ಶಂಕೆ - Dead body was found in raichuru
ನಾಪತ್ತೆಯಾಗಿದ್ದ ಬಾಲಕ ರಾಯಚೂರು ಜಿಲ್ಲೆಯ ಸಿಂಧನೂರು ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ..
![ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಬಾಲಕನ ಶವ ಪತ್ತೆ:ಕೊಲೆ ಶಂಕೆ fds](https://etvbharatimages.akamaized.net/etvbharat/prod-images/768-512-9305972-thumbnail-3x2-vish.jpg)
ಬಾಲಕನ ಶವ ಪತ್ತೆ
ಬಾಲಕನ ಶವ ಪತ್ತೆ
ಬಾಲಕನ ಮೃತದೇಹ ರಾಯಚೂರು ಜಿಲ್ಲೆಯ ಸಿಂಧನೂರು ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಪತ್ತೆಯಾಗಿದೆ. ಕಾರಟಗಿ ಪಟ್ಟಣದ ನಜೀರ್ ಕಾಲೋನಿ ನಿವಾಸಿಯಾಗಿರುವ ಹತ್ತು ವರ್ಷದ ಬಾಲಕ ಮಲ್ಲಿಕಾರ್ಜುನ ಎಂಬಾತನನ್ನು ದುಷ್ಕರ್ಮಿಗಳು ಕೈ-ಕಾಲು ಕಟ್ಟಿ ತುಂಗಭದ್ರಾ ಎಡದಂಡೆ ಕಾಲುವೆಗೆ ಎಸೆದಿದ್ದಾರೆ.
ಬಾಲಕನಿಗೆ ಈಜು ಬರುತ್ತೆ ಎಂಬುದು ಗೊತ್ತಿದ್ದೇ ಆತನ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದಿದ್ದಾರೆ. ಬಾಲಕ ಮಲ್ಲಿಕಾರ್ಜುನ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈ ಕುರಿತಂತೆ ಬಾಲಕನ ಪೋಷಕರು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.