ರಾಯಚೂರು: ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿಯ ಪೀಠ ಅಲಂಕರಿಸಿದ್ದ ದಿನದ ನಿಮಿತ್ತ ಗುರು ವೈಭವೋತ್ಸವ ವರ್ಧಂತೋತ್ಸವವು ಮಂತ್ರಾಲಯದ ಮಠದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.
ರಾಯರ ಮಠದಲ್ಲಿ ಗುರು ವೈಭೋತ್ಸವ ಸಂಭ್ರಮ - ರಾಯಚೂರು ಸುದ್ದಿ
ತುಂಗಾ ತೀರದಲ್ಲಿ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿ ಪೀಠ ಅಲಂಕರಿಸಿದ್ದ ದಿನದ ನಿಮಿತ್ತ ಏಳು ದಿನಗಳ ಕಾಲ ಗುರು ವೈಭವೋತ್ಸವ ಹಾಗೂ ವರ್ಧಂತೋತ್ಸವವು ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.
![ರಾಯರ ಮಠದಲ್ಲಿ ಗುರು ವೈಭೋತ್ಸವ ಸಂಭ್ರಮ coronation-of-sri-raghavendra-swamy-at-mantralaya](https://etvbharatimages.akamaized.net/etvbharat/prod-images/768-512-6201226-thumbnail-3x2-rcr.jpg)
coronation-of-sri-raghavendra-swamy-at-mantralaya
ರಾಯರ ಮಠದಲ್ಲಿ ಗುರು ವೈಭವೋತ್ಸವ ಸಂಭ್ರಮ
ಶ್ರೀಗುರು ರಾಯರು ಗುರುರಾಜರಿಂದ ಪೀಠ ಅಲಂಕರಿಸಿ ಇಂದಿಗೆ 399ನೇ ವರ್ಷ ಹಾಗೂ ಮಾರ್ಚ್ 2ರಂದು ಅವರ 425ನೇ ವರ್ಧಂತೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಮಠದಲ್ಲಿ ಏಳು ದಿನಗಳ ಸಪ್ತ ಗುರು ವೈಭವೋತ್ಸವ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಏಳು ದಿನಗಳ ಕಾಲ ಮೂಲ ರಾಮದೇವರಿಗೆ ಅಭಿಷೇಕ, ರಾಯರ ಪಾದುಕೆಗಳಿಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ.