ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಪೊಲೀಸ್​​ ಕಾನ್ಸ್‌ಟೇಬಲ್​​ಗಳ ನಿರ್ಗಮನ ಪಥಸಂಚಲನ - undefined

ನಗರದ ಪೋಲೀಸ್ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್​ಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಸಶಸ್ತ್ರ ಪೋಲಿಸ್ ಕಾನ್ಸ್‌ಟೇಬಲ್ ನಿರ್ಗಮನ ಪಥ ಸಂಚಲನ

By

Published : Jul 16, 2019, 7:02 PM IST

ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್​​ಗಳ ನಿರ್ಗಮನ ಪಥಸಂಚಲನ ನಡೆಯಿತು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರಿಗೆ ಇರುವುದು ಎರಡು ಹಬ್ಬಗಳು ಮಾತ್ರ. ಒಂದನೇಯದು ಪೊಲೀಸ್ ಧ್ವಜಾ ದಿನ ಹಾಗೂ ಎರಡನೇಯದು ಹುತಾತ್ಮರ ದಿನಾಚರಣೆ ಎಂದರು.

ಪೊಲೀಸ್ ಕಾನ್ಸ್‌ಟೇಬಲ್​ಗಳ ನಿರ್ಗಮನ ಪಥಸಂಚಲನ

ಪೊಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು. ಇದಕ್ಕೆ ಕಾರಣ ಪೊಲೀಸರು ಆಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದು. ಪೊಲೀಸರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.


For All Latest Updates

TAGGED:

ABOUT THE AUTHOR

...view details