ಕರ್ನಾಟಕ

karnataka

ETV Bharat / state

'ಇನ್ಮುಂದೆ ಕ್ಷೇತ್ರದಲ್ಲಿ ನಿನ್ನ ಆಟ, ಗೂಂಡಾಗಿರಿ, ಬೆದರಿಕೆಗಳು ನಡೆಯಲ್ಲ' - ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅಭ್ಯರ್ಥಿ

ಮಸ್ಕಿ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ ಪಕ್ಷದ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಹರಿಹಾಯ್ದಿದ್ದಾರೆ.

Congress candidate against BJp candidate in Maski
ಬಿಜೆಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದ ಕೈ ಅಭ್ಯರ್ಥಿ

By

Published : Mar 31, 2021, 4:38 PM IST

ಮಸ್ಕಿ (ರಾಯಚೂರು): ಇನ್ಮುಂದೆ ಕ್ಷೇತ್ರದಲ್ಲಿ ನಿನ್ನ ಆಟ, ನಿನ್ನ ಗೂಂಡಾಗಿರಿ, ಬೆದರಿಕೆಗಳು ನಡೆಯಲ್ಲ. ಕ್ಷೇತ್ರದ ‌ಸ್ವಾಭಿಮಾನ, ಜನರ ನಂಬಿಕೆ ಮಾರಾಟ ಮಾಡಿಕೊಂಡ ನಿನಗೆ ತಕ್ಕ ಪಾಠವನ್ನು ಜನರು ಚುನಾವಣೆಯಲ್ಲಿ ಕಲಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಎಚ್ಚರಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದ ಕೈ ಅಭ್ಯರ್ಥಿ

ಮಸ್ಕಿ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ ಪಕ್ಷದ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಹರಿಹಾಯ್ದಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​‌ನಲ್ಲಿ ಕಾಂಗ್ರೆಸ್ ಮುಖಂಡರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಹಂಪನಗೌಡ ಬಾದರ್ಲಿಯವರಿಗೆ ಹಗುರವಾಗಿ ಮಾತನಾಡುತ್ತಿರುವುದರ ಬಗ್ಗೆ ಕೇಳಿದ್ದೇನೆ. ಇದೇ ನಾಯಕರು ಕಳೆದ ಎರಡು ಸಾರ್ವತ್ರಿಕ ‌ಚುನಾವಣೆಯಲ್ಲಿ ನಿಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಅದರ ಫಲವಾಗಿ ಎರಡು ಬಾರಿ‌ ಶಾಸಕರಾಗಿದ್ದೀರಾ ಎಂದು ಕಿಡಿಕಾರಿದರು.

ಇದನ್ನೂ ಓದಿ:ದೇವೇಗೌಡ ದಂಪತಿಗೆ ಕೊರೊನಾ: ಆತಂಕ ಪಡಬೇಡಿ- ಕಾರ್ಯಕರ್ತರಿಗೆ ಹೆಚ್​ಡಿಕೆ ಧೈರ್ಯ

ಆದ್ರೆ‌ ಈಗ ಅದೇ ನಾಯಕರಿಗೆ ಎಲೆಕ್ಷನ್ ಮಾಡುವುದು ಹೇಗೆ ಎನ್ನುವ ಮಾತುಗಳನ್ನ ಹೇಳುತ್ತಿದ್ದಾರೆ. ಇನ್ಮುಂದೆ ಕ್ಷೇತ್ರದಲ್ಲಿ ನಿನ್ನ ಆಟ, ಗೂಂಡಾಗಿರಿ ನಡೆಯುವುದಿಲ್ಲ. ಈ ಬೈ ಎಲೆಕ್ಷನ್ ‌ನಲ್ಲಿ ನಿನಗೆ ತಕ್ಕಪಾಠವನ್ನ ಮತದಾರರು‌ ಕಲಿಸುತ್ತಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details