ಕರ್ನಾಟಕ

karnataka

ETV Bharat / state

ತಹಶೀಲ್ದಾರ್​ಗೆ ಕಪಾಳಕ್ಕೆ ಹೊಡೆಯುವೆ ಅಂದ್ರು.. ಆ ಮೇಲೆ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ.. - undefined

ಬರ ಅಧ್ಯಯನ ನಡೆಸುವ ವೇಳೆ ತಹಶೀಲ್ದಾರ್​​ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದ ಬಿಎಸ್​ವೈ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್​ಗೆ ಕಪಾಳಕ್ಕೆ ಹೊಡೆಯುವ ಎಂದ ಬಿಎಸ್​ವೈ

By

Published : Jun 9, 2019, 8:01 AM IST

Updated : Jun 9, 2019, 9:19 AM IST

ರಾಯಚೂರು:ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸುವ ವೇಳೆ ಲಿಂಗಸ್ಗೂರು ತಾಲೂಕಿನ ರಾಮಾಜೀ ನಾಯ್ಕ ತಾಂಡಾದಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದ ನಂತರ ಆಕ್ರೋಶಗೊಂಡ ಮಾಜಿ ಸಿಎಂ ಬಿಎಸ್​ವೈ ತಹಶೀಲ್ದಾರ್​​ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಬಳಿಕ ಆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಮಾಜೀ ನಾಯ್ಕ ತಾಂಡಾದಲ್ಲಿ ನೀರಿನ ಸಮಸ್ಯೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಕುರಿತು ಸಾರ್ವಜನಿಕರು ದೂರನ್ನು ನೀಡಿದಾಗ, ಆಕ್ರೋಶಗೊಂಡ ಯಡಿಯೂರಪ್ಪ ಲಿಂಗಸೂಗೂರು ತಹಶೀಲ್ದಾರ್ ಚಂದ್ರಶೇಖರ್​​ಗೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದರು. ಆದರೆ, ಮಾಧ್ಯಮಗಳಲ್ಲಿ ಎಲ್ಲಿ ಇದು ಸುದ್ದಿಯಾಗುತ್ತೋ ಏನೋ ಅಂತಾ ತಾವೇ ಪತ್ರಕರ್ತರ ಎದುರಿಗೆ ವಿಷಾದಿಸಿದ್ದಾರೆ. ಜತೆಗೆ ಈ ವಿಷಯವನ್ನು ದೊಡ್ಡದಾಗಿ ಮಾಡ್ಬಾರದು ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಮಾಧ್ಯಮಗಳ ಮುಂದೆ ಬಿಎಸ್​ವೈ ವಿಷಾದ

ನಂತರ ಲಿಂಗಸೂಗೂರು ಪ್ರವಾಸಿ ಮಂದಿರದಲ್ಲಿ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದಾಗ, ಅಧಿಕಾರಿಗಳ ನಿರ್ಲಕ್ಷ್ಯ ನೋಡಿ ತಹಶೀಲ್ದಾರ್​ಗೆ ಹಾಗೆ ಬೈದಿದ್ದೇನೆ, ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

Last Updated : Jun 9, 2019, 9:19 AM IST

For All Latest Updates

TAGGED:

ABOUT THE AUTHOR

...view details