ಕರ್ನಾಟಕ

karnataka

ETV Bharat / state

ನಿಯಂತ್ರಣ ತಪ್ಪಿ ಬಿದ್ದ ಬೈಕ್​​​​: ಇಬ್ಬರು ಸವಾರರು ಗಂಭೀರ - Bike accident in Manthralaya Road Raichuru

ಬೈಕ್​ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ರಾಯಚೂರು ನಗರದ ಮಂತ್ರಾಲಯ ರಸ್ತೆಯ ಆರ್​ಟಿಒ ಕಚೇರಿ ಬಳಿ ನಡೆದಿದೆ.

Bike accident in raichuru
ಇಬ್ಬರು ಸವಾರರು ಗಂಭೀರ

By

Published : Dec 16, 2019, 8:29 AM IST

ರಾಯಚೂರು:ಬೈಕ್​ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಸವಾರರು​ ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

ನಗರದ ಮಂತ್ರಾಲಯ ರಸ್ತೆಯ ಆರ್​ಟಿಒ ವೃತ್ತದ ಬಳಿ ಈ ದುರ್ಘಟನೆ ನಡೆದಿದೆ. ಶ್ರೀನಿಧಿ ಮತ್ತು ಶ್ರೀನಿವಾಸ್ ಗಾಯಗೊಂಡ ಬೈಕ್​ ಸವಾರರೆಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಗಾಯಗಳುಗಳನ್ನು ಹತ್ತಿರದ ನವೋದಯ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಅಲ್ಲಿಂದ ರಿಮ್ಸ್​​ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯಗೊಂಡಿರುವುದರಿಂದ ನಂತರ ಇಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀನಿಧಿ ಮತ್ತು ಶ್ರೀನಿವಾಸ್ ಕೆಟಿಎಂ ಬೈಕ್​ನಲ್ಲಿ ತೆರಳುತ್ತಿದ್ದ ಈ ವೇಳೆ ಆರ್​​ಟಿಒ ಸರ್ಕಲ್ ಬಳಿ ಬೈಕ್​ ನಿಯಂತ್ರಣ ತಪ್ಪಿ ಬಿದ್ದಿದೆ. ರಾಯಚೂರು ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details