ಕರ್ನಾಟಕ

karnataka

ETV Bharat / state

ನ್ಯಾಯ ಎಲ್ಲಿದೆ?... ಪಡಿತರ ಅಕ್ಕಿ ವಿತರಣೆಯಲ್ಲಿ ಮೋಸ, ತೂಕದ ಬದಲು ಬಕೆಟ್​​ನಲ್ಲಿ ಅಳತೆ

ನ್ಯಾಯ ಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗೆ 7 ಕೆ.ಜಿ. ಅಕ್ಕಿಯನ್ನ ತೂಕ ಮಾಡಿ ನೀಡಬೇಕು. ಆದ್ರೆ ತೂಕವಿಲ್ಲದೆ ಬಕೆಟ್​ನಲ್ಲಿ 6 ಕೆ.ಜಿ. ಮಾತ್ರ ನೀಡುತ್ತಾರೆ ಎಂದು ಬಸಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

By

Published : Nov 28, 2019, 3:16 PM IST

Allegations of injustice at fair shop in Raichur
ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯದ ಆರೋಪ

ರಾಯಚೂರು:ಪಡಿತರ ಅಕ್ಕಿ ವಿತರಣೆಯಲ್ಲಿ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಕೇಳಿ ಬಂದಿದೆ.

ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯದ ಆರೋಪ

ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಅರ್ಹ ಫಲಾನುಭವಿಗೆ 7 ಕೆ.ಜಿ. ಅಕ್ಕಿಯನ್ನ ತೂಕ ಮಾಡಿ ನೀಡಬೇಕು. ಆದ್ರೆ ತೂಕವಿಲ್ಲದೆ ಬಕೆಟ್​ನಲ್ಲಿ 6 ಕೆ.ಜಿ. ಮಾತ್ರ ನೀಡುತ್ತಾರೆ ಎಂದು ಬಸಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ನ್ಯಾಯ ಬೆಲೆ ಅಂಗಡಿಯಲ್ಲಿ ನಡೆಯುತ್ತಿರುವ ಮೋಸವನ್ನ ಗ್ರಾಮಸ್ಥರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಈ ನ್ಯಾಯ ಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಜೊತೆಗೆ ಪರವಾನಿಗೆ ರದ್ದು ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details